- Advertisement -
- Advertisement -
ಕಾಸರಗೋಡು: ರೈಲಿನಿಂದ ಬಿದ್ದು ಒಡಿಸ್ಸಾ ಮೂಲದ ವ್ಯಕ್ತಿಯೋರ್ವರು ಮೃತಪಟ್ಟ ದಾರುಣ ಘಟನೆ ಕಾಸರಗೋಡು ರೈಲು ನಿಲ್ದಾಣದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಒಡಿಸ್ಸಾದ ಸುಶಾಂತ್ ( 41) ಎಂದು ಗುರುತಿಸಲಾಗಿದೆ.
ಮೃತ ಸುಶಾಂತ್ ಮಂಗಳೂರಿನ ಪೆಟ್ರೋಲ್ ಬಂಕ್ನಲ್ಲಿ ನೌಕರರಾಗಿದ್ದರು. ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ರೈಲಿನಲ್ಲಿ , ಕಾಸರಗೋಡು ರೈಲು ನಿಲ್ದಾಣದಲ್ಲಿ ಕುಡಿಯುವ ನೀರು ಖರೀದಿಸಲು ಇಳಿದಿದ್ದು, ಈ ಸಂದರ್ಭದಲ್ಲಿ ರೈಲು ಮುಂದಕ್ಕೆ ಚಲಿಸಿದೆ. ಇದರಿಂದ ಓಡಿ ರೈಲಿಗೆ ಹತ್ತಲು ಯತ್ನಿಸಿದಾಗ ರೈಲು ಹಳಿ ಮತ್ತು ಫ್ಲ್ಯಾಟ್ ಫಾರ್ಮ್ ನಡುವೆ ಸಿಲುಕಿದ್ದು , ಸ್ಥಳದಲ್ಲೇ ಮೃತಪಟ್ಟಿದ್ದಾರೆ .
ಮೃತದೇಹದಿಂದ ಲಭಿಸಿದ ಪಾನ್ ಕಾರ್ಡ್ ನಿಂದ ಗುರುತು ಪತ್ತೆ ಹಚ್ಚಲಾಗಿದೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ
- Advertisement -