- Advertisement -
- Advertisement -
ಮಂಡ್ಯ: ಕರೊನಾ ತಾಯಿ ಮೃತಪಟ್ಟಳು ಎಂಬ ಸುದ್ದಿ ಕೇಳಿ ಮಗ ಹೃದಯಾಘಾತದಿಂದ ಸಾವಿಗೀಡಾಗಿರುವ ಘಟನೆ ಮಂಡ್ಯದ ಸುಭಾಷ್ ನಗರದಲ್ಲಿ ನಡೆದಿದೆ.
ಸುಜಾತ(60) ಕರೊನಾದಿಂದ ಆಸ್ಪತ್ರೆಯಲ್ಲಿ ಮೃತ ಪಟ್ಟ ತಾಯಿ. ರಮೇಶ್(38) ಹೃದಯಾಘಾತದಿಂದ ಮನೆಯಲ್ಲಿ ಸಾವನ್ನಪ್ಪಿದ ಮಗ. ಕರೊನಾ ಸೋಂಕು ಹಿನ್ನೆಲೆ ಮೇ 07ರಂದು ಸುಜಾತಾರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕೀಲಾರ ಸಮುದಾಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಯಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ. ಇತ್ತ ತಾಯಿಗೆ ಕೋವಿಡ್ ಬಂದ ದಿನದಿಂದ ಮಾನಸಿಕ ಆಘಾತಕೊಳಗಾಗಿದ್ದ ಮಗ, ತಾಯಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮನೆಯಲ್ಲಿಯೇ ಹೃದಯಾಘಾತವಾಗಿದೆ.
ಒಂದೇ ದಿನ ಕುಟುಂಬದ ಇಬ್ಬರ ಸಾವಿನಿಂದ ಕಂಗಾಲಾದ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ. ಹೆಂಡತಿ ಜತೆ ವಿಚ್ಛೇದನ ಪಡೆದುಕೊಂಡ ಬಳಿಕ ರಮೇಶ್, ತಾಯಿ ಜತೆ ವಾಸವಿದ್ದ. ಕೌಟುಂಬಿಕ ಜಗಳದಿಂದ ಹೆಂಡತಿಯಿಂದ ಬೇರ್ಪಟ್ಟಿದ್ದ.
- Advertisement -