- Advertisement -
- Advertisement -
ಮಂಗಳೂರು: ನೆರೆಮನೆಯ ವ್ಯಕ್ತಿಯೊಬ್ಬ ಡಾಬರ್ ಮನ್ ಸಾಕು ನಾಯಿಗೆ ವಿಷ ಹಾಕಿ ಕೊಂದ ಬಗ್ಗೆ ನಗರದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಕಾಪಿಕಾಡ್ 4ನೇ ಕ್ರಾಸ್ನಲ್ಲಿದ್ದ ವ್ಯಕ್ತಿಯೊಬ್ಬರ 4 1/2 ವರ್ಷದ ಡಾಬರ್ ಮನ್ ನಾಯಿ ಸಾಕುತ್ತಿದ್ದರು. ಜು.24 ರಂದು ನೆರೆಮನೆಯ ಭೀಮಯ್ಯ ಎಂಬವರು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ನಾಯಿಗೆ ವಿಷ ಪದಾರ್ಥವನ್ನು ಹಾಕಿದ್ದಾರೆ.
ಪರಿಣಾಮ ಜು.25 ರಂದು ನಾಯಿ ರಕ್ತ ವಾಂತಿ ಮಾಡಿಕೊಂಡು ಮೃತಪಟ್ಟಿದೆ. ಈ ಹಿನ್ನೆಲೆ ನಾಯಿ ಸಾವಿಗೆ ಕಾರಣನಾದ ಭೀಮಯ್ಯ ಎಂಬವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಸಾಕು ನಾಯಿಯ ಯಜಮಾನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
- Advertisement -