Saturday, June 28, 2025
spot_imgspot_img
spot_imgspot_img

ಮಂಗಳೂರು: ಮಂಗಳೂರು ಲೋಕಸಭಾ ಅಭ್ಯರ್ಥಿಯ ಮಹತ್ವದ ಬೆಳವಣಿಗೆ; ಪಕ್ಷದ ನಿಷ್ಟಾವಂತ ಕಾರ್ಯಕರ್ತನಿಗೆ ಟಿಕೆಟ್ ಸಾಧ್ಯತೆ; ಅಂತಿಮ ಪಟ್ಟಿಯಲ್ಲಿ ಕಿಶೋರ್‍ ಕುಮಾರ್‍ ಬೊಟ್ಯಾಡಿ ಹೆಸರು ಫೈನಲ್ ಆಗುವ ಸಾಧ್ಯತೆ

- Advertisement -
- Advertisement -

ಮಂಗಳೂರು: ಈ ಭಾರಿ ಬಾರಿ ಕುತೂಹಲ ಕೆರಸಿರುವ ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಇಂದು ತೆರೆ ಎಳೆಯುವ ಸದ್ಯತೆ ಇದೆ. 3 ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಹೆಸರು ಮುಂಚೂಣಿಯಲ್ಲಿದ್ದು ನಿನ್ನೆ ಸಂಸದರು ನೀಡಿರುವ ಮಾಧ್ಯಮ ಹೇಳಿಕೆಯ ಮೂಲದ ಪ್ರಕಾರ ಟಿಕೆಟ್ ಕೈತಪ್ಪುವ ಸದ್ಯಕ್ಕೆ ಹೆಚ್ಚಾಗಿದೆ.

ಇನ್ನು ನಳಿನ್ ಕುಮಾರ್‍ ಮತ್ತು ಬ್ರಿಜೇಶ್ ಚೌಟ ರವರ ಹೆಸರು ಮುಂಚೂಣಿಯಲ್ಲಿರುವಾಗಲೆ ನಿನ್ನೆ ಮಹತ್ವದ ಬೆಳವಣಿಗೆಯೊಂದು ಬಿಜೆಪಿಯಲ್ಲಿ ಬಾರಿ ಸಂಚಲನ ಮೂಡಿಸಿದೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಿಗೆ ಈ ಬಾರಿಯ ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಬಹುತೇಕ ಫೈನಲ್ ಹಂತದಲ್ಲಿದೆ.

ಕಿಶೋರ್‍ ಕುಮಾರ್‍ ಬೊಟ್ಯಾಡಿ ಅನೇಕ ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ದುಡಿದವರು.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಅಂತಿಮ 3 ಜನರ ಹೆಸರಲ್ಲಿ ಕಿಶೋರ್‍ ಅವರ ಹೆಸರು ‌ಇತ್ತು.ಆದರೆ ಅಂತಿಮವಾಗಿ ಆಶಾ ತಿಮ್ಮಪ್ಪರವರ ಹೆಸರು ನಿರ್ಧಾರವಾದಾಗ ಕಿಶೋರ್‍ ರವರು ಅವರ ಜೊತೆ ನಿಂತು ಕೆಲಸ ಮಾಡಿ ಪಕ್ಷ ನಿಷ್ಠೆ ತೋರಿಸಿದ್ದರು.

ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಾರ್ಥಿಯಾಗಿ ಕಿಶೋರ್‍ ಕುಮಾರ್ ಬೊಟ್ಯಾಡಿಯವರ ಹೆಸರು ಫೈನಲ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

- Advertisement -

Related news

error: Content is protected !!