- Advertisement -
- Advertisement -
ಮಂಗಳೂರು: ನ್ಯಾಯವಾದಿ ಕೆ ಎಸ್ ಎನ್ ರಾಜೇಶ್ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ಮಂಗಳೂರು ಹೊರವಲಯದ ಬೋಂದೆಲ್ ನಿವಾಸಿ ಅನಂತ ಭಟ್ ಎಂದು ತಿಳಿದುಬಂದಿದೆ.
ಕೆ ಎಸ್ ಎನ್ ರಾಜೇಶ್ ಭಟ್ ತಲೆ ಮರೆಸಿಕೊಳ್ಳಲು ಅನಂತ್ ಭಟ್ ಸಹಕರಿಸಿದ್ದ. ಆರೋಪಿ ಕೆ ಎಸ್ ಎನ್ ರಾಜೇಶ್ ಭಟ್ ಕಾರು ಮತ್ತು ಮೊಬೈಲ್ ಫೋನ್ ನ್ನು ಅಜ್ಞಾತ ಸ್ಥಳದಲ್ಲಿ ಅನಂತ ಭಟ್ ಬಚ್ಚಿಟ್ಟಿದ್ದ ಎನ್ನಲಾಗಿದೆ. ಬಂಧಿತ ಅರೋಪಿಯಿಂದ ರಾಜೇಶ್ ಭಟ್ ನ Toyota Etios ಕಾರು ಮತ್ತು ಮೊಬೈಲ್ ಫೋನ್ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
- Advertisement -