Sunday, June 29, 2025
spot_imgspot_img
spot_imgspot_img

ಮಂಗಳೂರು: ಗದ್ದೆಯಲ್ಲಿ ಸ್ವತ: ಟ್ರ್ಯಾಕ್ಟರ್ ಚಲಾಯಿಸಿ ಕೃಷಿ ಕಾರ್ಯದಲ್ಲಿ ಪಾಲ್ಗೊಂಡ ಶಾಸಕ ಡಾ.ಭರತ್ ಶೆಟ್ಟಿ

- Advertisement -
- Advertisement -

ಮಂಗಳೂರು: ಶಾಸಕ ಡಾ.ಭರತ್ ಶೆಟ್ಟಿಯವರು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಬೊಂಡಂತಿಲ ಗ್ರಾಮದ ಪಡು ಹೊಸಮನೆಯ ಹಡೀಲು ಭೂಮಿಯಲ್ಲಿ ಕೃಷಿ ಕಾರ್ಯ ನಡೆಯುತ್ತಿರುವಾಗ ಭೇಟಿ ನೀಡಿದ ಅವರು ಸ್ವತ: ಟ್ರ್ಯಾಕ್ಟರ್ ಚಲಾಯಿಸಿ, ಭತ್ತ ಕೃಷಿಯ ವಿವಿಧ ಕಾರ್ಯಗಳಲ್ಲಿ ಕೃಷಿಕರೊಂದಿಗೆ ಪಾಲ್ಗೊಂಡು ಸ್ಥಳೀಯರಲ್ಲಿ ಉತ್ಸಾಹ ತುಂಬಿದರು.

ತಮ್ಮ ವಿಧಾನಸಭಾ ಕ್ಷೇತ್ರದಲ್ಲಿರುವ ಹಡೀಲು ಭೂಮಿಗಳಲ್ಲಿ ಕೃಷಿ ಕಾರ್ಯ ನಡೆಸಲು ಸ್ಥಳೀಯರಲ್ಲಿ ಸ್ಫೂರ್ತಿ ತುಂಬುತ್ತಿರುವ ಶಾಸಕ ಡಾ.ಭರತ್ ಶೆಟ್ಟಿಯವರ ಈ ನಡೆಯು ಕೃಷಿಬಂಧುಗಳಲ್ಲಿ ಹುಮ್ಮಸ್ಸನ್ನು ಉಂಟುಮಾಡಿದೆ.

A.P.M.C ಸದಸ್ಯರಾದ ಬೊಂಡಂತಿಲ ಪಡು ಹೊಸಮನೆಯ ವಾಣಿ ಆರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಡು ಹೊಸ ಮನೆಯ ಹಿರಿಯರಾದ ಜಯರಾಮ ರೈ, ಪ್ರಗತಿಪರ ಕೃಷಿಕ ಗೋಪಾಲ ಕೃಷ್ಣ ಭಂಡಾರಿ, ಭಾಜಪಾ ವಕ್ತಾರ ಜಗದೀಶ್ ಶೇಣವ, ಉತ್ತರ ಮಂಡಲ ರೈತ ಮೋರ್ಚಾ ಅಧ್ಯಕ್ಷ ಪ್ರಕಾಶ್ ಆಳ್ವ, ರೈತ ಮೋರ್ಚಾದ ಕೋಶಾಧಿಕಾರಿ ನಾಗೇಶ್ ಕಾಪೆಟ್ಟು ,ಪಂಚಾಯತ್ ಸದಸ್ಯರಾದ ಕಿಶೋರ್ ಕುಮಾರ್ ಉಗ್ಗಕೊಡಿ, ಶ್ರೀಧರ್ ಚಿಕ್ಕ ಬೆಟ್ಟು, ತಾಲೂಕು ಪಂಚಾಯತ್ ಮಾಜಿ ಸದಸ್ಯ ಗೋಕುಲ್ ದಾಸ್ ಶೆಟ್ಟಿ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸಚಿನ್ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ದಿನೇಶ್ ತಲ್ಲಿಮಾರು, ನೀರು ಮಾರ್ಗ ಮಹಾಶಕ್ತಿ ಕೇಂದ್ರದ ಹರಿಕೇಶ್ ಶೆಟ್ಟಿ, ಉಳೈಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ತಿಲಕ್ ಕೋರೆಟ್ಟು, ಕುಂಜಣ್ಣ ಶೆಟ್ಟಿ ಕೋರೆಟ್ಟುಗುತ್ತು, ಶಕ್ತಿಕೇಂದ್ರ ಪ್ರಮುಖ ಯಶ್ವಿನ್ ಎನ್ ಕುಂದರ್ ಮೋರ್ಚಾಗಳ ಪ್ರಮುಖರು ಬೂತ್ ಅಧ್ಯಕ್ಷರು ಮತ್ತು ಇತರರು ಉಪಸ್ಥಿತರಿದ್ದರು.

driving
- Advertisement -

Related news

error: Content is protected !!