Friday, April 26, 2024
spot_imgspot_img
spot_imgspot_img

ಪುಣಚ : ಆರ್. ಕೆ. ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘ ಪರಿಯಾಲಡ್ಕ ಇದರ ಸಭಾಂಗಣದಲ್ಲಿ ಆರ್. ಕೆ. ಕುಣಿತ ಭಜನಾ ತಂಡದ ಉದ್ಘಾಟನಾ ಕಾರ್ಯಕ್ರಮ ಜರುಗಿತು.

ಉದ್ಘಾಟನೆಯನ್ನು ಶ್ರೀದೇವಿ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕ ಗಣಪತಿ ಭಟ್‌ ನೀರ್ಕಜೆ ಇವರು ನೆರವೇರಿಸಿ ಮಕ್ಕಳ ಕುಣಿತ ಭಜನಾ ತಂಡವು ಯಶಸ್ಸನ್ನು ಗಳಿಸುತ್ತಾ ಸಾಗಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪುಣಚ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ದೇವಿ ಪ್ರಸಾದ್ ಕಲ್ಲಾಜಿ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಸಹ ಶಿಕ್ಷಕ ಕೊಟ್ರೇಶ್ ಅಗ್ರಾಳ ಹಾಗೂ ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಕ್ಕಳನ್ನು ಹಾಗೂ ಕಾರ್ಯಕ್ರಮದ ಸಂಘಟಕರನ್ನು ಪೋಷಕರನ್ನು ಅಭಿನಂದಿಸಿದರು.

ಕುಣಿತ ಭಜನಾ ತರಗತಿಯ ನಿರ್ದೇಶಕ ರಾಜೇಶ್ ವಿಟ್ಲ ಇವರು ಭಜನೆ ಹಾಗೂ ಕುಣಿತ ಭಜನೆಯ ಮಹತ್ವವನ್ನು ವಿವರಿಸಿ ಯುವಜನತೆ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಹೆಚ್ಚು ತೊಡಗಿಕೊಳ್ಳುವಂತೆ ಕರೆ ನೀಡಿದರು.

ಈ ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಈ ಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಒಂದು ಒಳ್ಳೆಯ ತಂಡ ನಿರ್ಮಾಣವಾಗಬೇಕೆಂದು ಕೇಳಿಕೊಂಡರು. ಶ್ರೀದೇವಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಜನಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು.

ಶ್ರೀದೇವಿ ಪ್ರಾಥಮಿಕ ಶಾಲೆಯ ಶ್ವೇತಾ ಇವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಸಂಘಟಕರಾದ ಪವಿತ್ರ, ಹಾಗೂ ಭವಾನಿ ಹಾಗೂ ಮಕ್ಕಳ ಹೆತ್ತವರು ಸಹಕರಿಸಿದರು. ಹರೀಶ್, ಹರ್ಷಿತಾ ಸ್ಟುಡಿಯೋ ಪರಿಯಾಲ್ಕರ ಇವರು ಛಾಯಾಗ್ರಹಣದಲ್ಲಿ ನೆರವಾದರು.

astr
- Advertisement -

Related news

error: Content is protected !!