Sunday, June 29, 2025
spot_imgspot_img
spot_imgspot_img

ಮಂಗಳೂರು: ಹಣ್ಣಿನೊಳಗೆ ಗಾಂಜಾವನ್ನಿಟ್ಟು ಖೈದಿಗೆ ನೀಡಲು ಯತ್ನಿಸಿದ ವ್ಯಕ್ತಿ ಅಂದರ್!

- Advertisement -
- Advertisement -

ಮಂಗಳೂರು: ಖೈದಿಯೋರ್ವನಿಗೆ ಅನನಾಸಿನ ಒಳಗೆ ಗಾಂಜಾವನ್ನು ನೀಡಲು ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ.

ಖೈದಿಗೆ ಗಾಂಜಾ ನೀಡಲು ಯತ್ನಿಸಿದ ಆರೋಪಿಯನ್ನು ಅಬ್ದುಲ್ ಮಜೀದ್ ಎನ್ನಲಾಗಿದೆ.

ಕಾರಾಗೃಹದಲ್ಲಿದ್ದ ರಾಜಪ್ಪ ಎಂಬಾತನಿಗೆ ಅಬ್ದುಲ್ ಮಜೀದ್ ಅಗತ್ಯ ವಸ್ತುಗಳನ್ನು ನೀಡಲು ಬಂದಿದ್ದನು. ಈ ವಸ್ತುಗಳನ್ನು ಭದ್ರತಾ ಸಿಬ್ಬಂದಿ ಪರಿಶೀಲಿಸಿದಾಗ ಎಕ್ಸರೇ ಬ್ಯಾಗೇಜ್‌ನಲ್ಲಿ ಅನಾನಸ್ ಹಣ್ಣಿನೊಳಗೆ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ.

ಕೂಡಲೇ ಹಣ್ಣನ್ನು ಬಿಚ್ಚಿ, ನೋಡಿದಾಗ ಹಣ್ಣಿನೊಳಗೆ ಸಣ್ಣ ಪ್ಯಾಕೇಟ್ ಒಳಗಡೆ ಗಾಂಜಾದಂತೆ ತೋರುವ ವಸ್ತು ಪತ್ತೆಯಾಗಿದೆ. ಕೂಡಲೇ ಆರೋಪಿ ಅಬ್ದುಲ್ ಮಜೀದ್‌ನನ್ನು ಪೊಲೀಸರು ವಶಕ್ಕೆ ಪಡೆದು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!