- Advertisement -
- Advertisement -
ಮಂಗಳೂರು: ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು ಜುಲೈ 23 ರಂದು ರಾತ್ರಿ ಶೌಚಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತವ್ಯಕ್ತಿಯನ್ನು ಕಡಬಾದ ಸಂಪಿಗೆ ಸಮೀಪದ ಪುತ್ತಿಗೆಪದವು ನಿವಾಸಿ ಜಯಾ (46) ಎಂದು ಗುರುತಿಸಲಾಗಿದೆ.
ಕೆಲ ಸಮಯದ ಹಿಂದೆ ಅನಾರೋಗ್ಯದಿಂದ ಜಯಾ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ರಾತ್ರಿ ಶೌಚಕ್ಕೆಂದು ತೆರಳಿದವರು ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮರಣೋತ್ತರ ಪರೀಕ್ಷೆ ಯ ಬಳಿಕ ಜಯಾ ಅವರ ಊರಾದ ಪುತ್ತಿಗೆಪದವಿಗೆ ಮೃತದೇಹವನ್ನು ಇದೀಗ ರವಾನಿಸಲಾಗಿದೆ.
- Advertisement -