


ಮಂಗಳೂರಿನ ಕಂಕನಾಡಿ ರಸ್ತೆಯ ಪಕ್ಕದಲ್ಲಿ ಇರುವ ಮಸೀದಿಯಲ್ಲಿ ಶುಕ್ರವಾರ ನಮಾಝ್ ಮಾಡುವ ಸಂಧರ್ಭದಲ್ಲಿ ಕೆಲವರು ಗುಂಪು ಸೇರಿ ಹಗಲು ಜನಸಂದಣಿ ವಾಹನ ಓಡಾಟ ಮಾಡುವ ಸಾರ್ವಜನಿಕ ರಸ್ತೆಯಲ್ಲಿ ನಮಾಝ್ ಮಾಡಿ ಸಾರ್ವಜನಿಕರಿಗೆ ತೊಂದರೆಯಾಗಿದದ್ದನ್ನು ಜನರು ಸಾಮಾಜಿಕ ಜಾಲಾತಾಣಗಳಲ್ಲಿ ಪ್ರಶ್ನಿಸಿದ್ದರು ಪರಿಸ್ಥಿತಿಯ ತೀವ್ರತೆಯನ್ನು ಮನಗೊಂಡ ಕಂಕನಾಡಿ ಪೋಲಿಸರು ಸುಮೋಟೋ ಕೇಸ್ ದಾಖಾಲಿದ್ದರು ಮತ್ತು ಹಿಂದೂ ಪರ ಸಂಘಟನೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಆಕ್ರೋಶ ವ್ಯಕ್ತ ಪಡಿಸಿದ್ದ ವಿಶ್ವ ಹಿಂದೂ ಪರಿಷತ್ತ್ ಮುಖಂಡ ಶರಣ್ ಪಂಪುವೆಲ್ ಮೇಲೆ ಪೋಲಿಸರು ಪ್ರಕರಣ ದಾಖಲಿಸಿದ್ದರು.ಆದರೆ ಇಷ್ಟೆಲ್ಲಾ ರಾದಂತದ ನಡುವೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರದ ಮುಸ್ಲಿಂ ಓಲೈಕೆಯ ಮುಂದುವರಿದ ಭಾಗವಾಗಿ ಮುಸ್ಲಿಮರ ಮೇಲೆ ದಾಖಲಿಸಿದ್ದ ಸುಮೋಟೋ ಕೇಸನ್ನು ವಾಪಸ್ ಪಡೆದು ಕೊಂಡಿದ್ದು ಕೇಸ್ ದಾಖಲಿಸಿದ್ದ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಮನೆಗೆ ಕಳುಹಿಸಿ ಆ ಅಧಿಕಾರಿಯ ಆತ್ಮಸ್ತರ್ಯವನ್ನು ಕುಗ್ಗಿಸಿ ರಾಜ್ಯದಲ್ಲಿ ಮುಂದೆ ಮುಸ್ಲಿಮರ ಮೇಲೆ ಪೋಲೀಸರು ಎಲ್ಲಿಯೂ ಪ್ರಕರಣ ದಾಖಲಿಸಲು ನೂರು ಬಾರಿ ಯೋಚಿಸುವಂತೆ ಮಾಡಿದ್ದು ಇದೊಂದು ಪೋಲಿಸ್ ಇಲಾಖೆಯ ಕೈ ಕಟ್ಟಿ ಹಾಕುವಂತೆ ಮಾಡಿ ರಾಜ್ಯದಲ್ಲಿ ತುಘಲಕ್ ಸರ್ಕಾರದ ಮುಸ್ಲಿಂ ಪ್ರೀತಿಯ ಪ್ರಶಂಸೆ ಗಿಟ್ಟಿಸುವ ಕೆಲಸವಾಗಿದೆ.
ಕಾಂಗ್ರೆಸ್ ಸರ್ಕಾರ ಬಂದ ಮೇಲೇ ಹನುಮಾನ್ ಚಾಲಿಸ್ ಕೇಳುವವರ ಮೇಲೆ ಮುಸ್ಲಿಮರಿಂದ ಹಲ್ಲೆ, ದಾರಿಯಲ್ಲಿ ವಾಹನದಲ್ಲಿ ಹೋಗುತ್ತಿರುವವರ ಮೇಲೆ ಹಲ್ಲೆ, ಪೋಲಿಸ್ ಠಾಣೆ ಧ್ವಂಸ,ಲವ್ ಜಿಹಾದಿಗೆ ಹುಬ್ಬಳ್ಳಿಯಲ್ಲಿ ಬಳಿ, ಪೋಲಿಸರಿಗೆ ಹಲ್ಲೆ, ನಡು ರಸ್ತೆಯಲ್ಲಿ ಗ್ಯಾಂಗ್ ವಾರ್ ಪ್ರಶ್ನಿಸುವ ಪೋಲಿಸರಿಗೆ ಅಮಾನತಿನ ಶಿಕ್ಷೆ ಸರಕಾರಿ ಅಧಿಕಾರಿಗಳ ಆತ್ಮಹತ್ಯೆ ಕಳ್ಳ ಕಾಕರ ಸಂತತಿ ಹೆಚ್ಚು ಒಟ್ಟು ರಾಜ್ಯದಲ್ಲಿ ಮುಸ್ಲಿಂ ಓಲೈಕೆಯಿಂದ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.ಎಲ್ಲಾ ವರ್ಗದ ಜನರಿಗೆ ಮುಖ್ಯಮಂತ್ರಿಯಾಗಿದ್ದರೂ ಒಂದು ಧರ್ಮದ ಪರವಾಗಿ ಓಲೈಕೆಯ ಕೆಲಸ ಮಾಡುತ್ತಿರುವ ಸರ್ಕಾರದ ಈ ನಡೆಗೆ ಹಿಂದೂ ಜಾಗರಣ ವೇದಿಕೆ ಮಂಗಳೂರು ವಿಭಾಗ ತೀವ್ರವಾಗಿ ಖಂಡಿಸುತ್ತದೆ ಮತ್ತು ಪ್ರತಿಭಟನೆಯ ಎಚ್ಚರಿಯನ್ನು ನೀಡುತ್ತಿದೆ.
ನರಸಿಂಹ ಮಾಣಿ
ಸಂಚಾಲಕರು
ಹಿಂದು ಜಾಗರಣ ವೇದಿಕೆ ಮಂಗಳೂರು ಗ್ರಾಮಂತರ ಜಿಲ್ಲೆ