ಪುತ್ತೂರು : ದ.ಕ. ಲೋಕಸಭಾ ಅಭ್ಯರ್ಥಿ ಆಯ್ಕೆ ಬೆನ್ನಲ್ಲೇ ಪುತ್ತಿಲ ಪರಿವಾರದ ವಕ್ತಾರ ಶ್ರೀಕೃಷ್ಣ ಉಪಾಧ್ಯಾಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಸಾಮಾನ್ಯ ಮತದಾರನಾಗಿ ನಾನು ಯೋಚನೆ ಮಾಡುವುದು ಏನೆಂದರೇ ಮತದಾರ ಪಕ್ಷ ನಿಷ್ಟನಾಗಿ ಇರಲೇಬಾರದು, ಒಬ್ಬ ದೇಶ ಭಕ್ತ ಮತದಾರ ದೇಶಕ್ಕೆ ಒಳ್ಳೆಯ ನಾಯಕನನ್ನು ಆಯ್ಕೆ ಮಾಡಬೇಕು, ಕೇಂದ್ರದಲ್ಲಿ ಮೋದಿಯವರ ನಾಯಕತ್ವದ ಬಗ್ಗೆ ಬಹಳ ಅಭಿಮಾನವಿದೆ.
ಮಾಜಿ ಸೈನಿಕ, ಯಂಗ್ಸ್ಟಾರ್, ಒಬ್ಬ ಕ್ರಿಯಾಶೀಲ ವ್ಯಕ್ತಿತ್ವದ ದ.ಕ. ಲೋಕಸಭಾ ಅಭ್ಯರ್ಥಿಯನ್ನಾಗಿ ಇದೀಗ ಬ್ರಿಜೇಶ್ ಚೌಟರವರ ಆಯ್ಕೆ ಬಹಳ ಸಂತೋಷ ತಂದಿದೆ. ಪುತ್ತೂರಿನಲ್ಲಿರುವ ಕೆಲವೊಂದು ಗೊಂದಲಗಳನ್ನು ಬ್ರಿಜೇಶ್ ಚೌಟರವರು ಸರಿ ಮಾಡಬಹುದು ಎಂಬ ನಂಬಿಕೆ ಇದೆ ಎಂದರು.
ಈ ಹಿಂದೆ ಪುತ್ತಲ ಪರಿವಾರದ ಲೋಕಸಭ ಅಭ್ಯರ್ಥಿ ಅರುಣ್ ಪುತ್ತಿಲರವರು ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು.ಅರುಣ್ ಪುತ್ತಿಲ ಲೋಕಸಭೆ ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರಾ..!!?? ಅಚ್ಚರಿಯ ಕ್ಷಣ ಕಾದುನೋಡಬೇಕಿದೆ. ಪುತ್ತಿಲ ಮತ್ತು ಬ್ರಿಜೇಶ್ ಚೌಟ ಸ್ಪಧಿಸಿದಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಲಾಭವಾಗುತ್ತಾ? ಈ ಎಲ್ಲಾ ಸಂಶಯಗಳು ಉದ್ಭವಿಸಿದೆ.