Sunday, June 29, 2025
spot_imgspot_img
spot_imgspot_img

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಹಾಗೂ ಪಿ.ವಿ.ಸಿಂಧುಗೆ ಐಸ್‌ಕ್ರೀಂ ಆಫರ್ ಕೊಟ್ಟ ಮಂಗಳೂರಿನ ಪಬ್ಬಾಸ್‌ ಕೆಫೆ

- Advertisement -
- Advertisement -

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಹಾಗೂ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಖ್ಯಾತ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧುಗೆ ಐಸ್‌ಕ್ರೀಂ ಆಫರ್ ಕೊಡುವುದಾಗಿ ಮಂಗಳೂರಿನ ಪ್ರಸಿದ್ದ ಐಸ್‌ಕ್ರೀಂ ಕೆಫೆಯಾದ ಪಬ್ಬಾಸ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಬಂದಲ್ಲಿ ಒಟ್ಟಾಗಿ ಕುಳಿತು ಐಸ್‌ಕ್ರೀಂ ಸವಿಯೋಣ ಎಂದು ಪ್ರಧಾನಿ ಮೋದಿ ಆಫರ್‌ ನೀಡಿದ್ದರು. ಅದರಂತೆಯೇ ಪಿ.ವಿ.ಸಿಂಧು ಅವರು ಕಂಚಿನ ಪದಕವನ್ನು ಗೆದ್ದಿದ್ದಾರೆ.

ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಐಸ್‌ಕ್ರೀಂ ಕುರಿತು ಟ್ವೀಟ್‌ ಮಾಡುತ್ತಿದ್ದಂತೆಯೇ ಮಂಗಳೂರಿನ ಪಬ್ಬಾಸ್‌ ಕೆಫೆ ಟ್ವೀಟ್‌ ಮಾಡಿದ್ದು, ಆತ್ಮೀಯ ಮೋದಿಯವರೇ, ತಾವು ಪಿ.ವಿ.ಸಿಂಧೂ ಅವರಿಗೆ ನೀವು ಭರವಸೆ ಕೊಟ್ಟಿದ್ದೀರಿ, ಅದರಂತೆ ಸಿಂಧು ಪದಕ ಗೆದ್ದು ಬಂದಿದ್ದಾರೆ. ಬ್ಯಾಡ್ಮಿಂಟನ್‌ ಆಟಗಾರ್ತಿಯ ಜೊತೆಗೆ ನಿಮಗೂ ಅತ್ಯುತ್ತಮ ಐಸ್‌ಕ್ರೀಂ ಒದಗಿಸಲು ನಾವು ಉತ್ಸುಕರಾಗಿದ್ದೇವೆ ಎಂದಿದೆ. ಪಬ್ಬಾಸ್‌ ಮಾಡಿರುವ ಟ್ವೀಟ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. ಮೋದಿಜೀ ಪಬ್ಬಾಸ್‌ ಐಸ್‌ಕ್ರೀಂ ಸವಿಯುತ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

- Advertisement -

Related news

error: Content is protected !!