Friday, March 29, 2024
spot_imgspot_img
spot_imgspot_img

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ಪೀಸ್ ಪಾರ್ಕ್’ಗೆ ಸ್ಟಾನ್ ಸ್ವಾಮಿ ಹೆಸರು; ಹೆಸರು ಬದಲಾವಣೆಗೆ ಹಿಂ.ಜಾ.ವೇ ಆಗ್ರಹ

- Advertisement -G L Acharya panikkar
- Advertisement -

ಮಂಗಳೂರು: ಭಯೋತ್ಪಾದಕ, ನಗರ ನಕ್ಸಲ್, ಈ ದೇಶದ ಅಸ್ಮಿತತೆಗೆ ಹಾಗೂ ಸಮಗ್ರತೆಗೆ ಚ್ಯುತಿ ತಂದಿರುವ ಭೀಮಾ ಕೋರೆಗಾಂವ್ ಪ್ರಕರಣದ ಪ್ರಮುಖ ಆರೋಪಿ ಸ್ಟಾನ್ ಸ್ವಾಮಿ ಹೆಸರನ್ನು ಪ್ರತಿಷ್ಠಿತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಪೀಸ್ ಪಾರ್ಕ್’ಗೆ ನಾಮಕರಣ ಮಾಡುತ್ತಿರುವುದನ್ನು ಹಿಂದು ಜಾಗರಣ ವೇದಿಕೆ ಮಂಗಳೂರು ಜಿಲ್ಲೆ ಖಂಡಿಸಿದೆ.

ಭಾರತದ ಪ್ರಧಾನ ಮಂತ್ರಿಗಳನ್ನು ಕೊಲ್ಲಲು ಸಂಚು ರೂಪಿಸಿರುವ ಪ್ರಮುಖ ಆರೋಪಿ ಸ್ಥಾನದಲ್ಲಿ ಇದ್ದು, ಬೇಲ್ ಸಿಗದೆ ಜೈಲಿನಲ್ಲಿ ಮೃತ ಹೊಂದಿರುವ ನಕಲಿ ಮಾನವ ಹಕ್ಕುಗಳ ಹೋರಾಟಗಾರ “ಸ್ಟಾನ್ ಸ್ವಾಮಿ”ಯ ಹೆಸರನ್ನು ಪಿಸ್ ಪಾರ್ಕ್’ಗೆ ನಾಮಕರಣ ಮಾಡುತ್ತಿರುವುದನ್ನು ಖಂಡಿಸಿದೆ. ಈಗಾಗಲೇ ಇಡಲು ಇಚ್ಛಿಸಿರುವ ಸ್ಟಾನ್ ಸ್ವಾಮಿಯ ಹೆಸರನ್ನು ಕೂಡಲೇ ಬದಲಾಯಿಸಬೇಕು ಇಲ್ಲವಾದಲ್ಲಿ ತೀವ್ರವಾದ ಪ್ರತಿಭಟನೆಯನ್ನು ಎದುರಿಸಬೇಕಾದಿತ್ತೆಂದು ಮುಖಂಡರು ತಮ್ಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

driving
- Advertisement -

Related news

error: Content is protected !!