Sunday, June 29, 2025
spot_imgspot_img
spot_imgspot_img

ಮಂಗಳೂರು : ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಚಿನ್ನ ಕಳವು

- Advertisement -
- Advertisement -

ಮಂಗಳೂರು: ನಗರದ ಉರ್ವಾ ಶಿರಡಿ ಸಾಯಿ ಬಾಬ ಮಂದಿರ ದ್ವಾರದ ಮುಂಭಾಗ ಕಾರು ನಿಲ್ಲಿಸಿ ಮಂದಿರಕ್ಕೆ ತೆರಳಿದ್ದ ವೇಳೆ ಖತರ್‌ನಾಕ್ ಕಳ್ಳರಿಬ್ಬರು ಬಂದು ಕಾರಿನ ಕಿಟಕಿಯ ಗಾಜನ್ನು ಹೊಡೆದು ಕಾರಿನಲ್ಲಿದ್ದ ಪಾಸ್ ಪೋರ್ಟ್, ಅಧಾರ್ ಕಾರ್ಡ್ ಎಟಿಎಮ್ ಕಾರ್ಡ್ ,ಹಾಗೂ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ಕಳವು ಮಾಡಿದ್ದು ಗುರುವಾರ ಮಧ್ಯಾಹ್ನ 12.45 ಕ್ಕೆ ಈ ಘಟನೆ ನಡೆದಿದೆ.

ರಸ್ತೆ ಬದಿ ಕಾರು ನಿಲ್ಲಿಸಿ ದೇವರ ದರ್ಶನಕ್ಕೆ ದೇಗುಲಕ್ಕೆ ಹೋಗಿದ್ದ ದಂಪತಿ ವಾಪಸ್ಸು ಬರುವ ವೇಳೆ ಈ ಘಟನೆ ನಡೆದಿದೆ. ಕಾರಿನ ಎಡಬದಿಯ ಹಿಂಬದಿಯ ಗಾಜನ್ನು ಒಡೆದು ಕಳ್ಳರು ಕಾರಿನ ಒಳಗಡೆ ಇದ್ದ ಬ್ಯಾಗನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಬ್ಯಾಗನಲ್ಲಿ ನಗದು, ವಿದೇಶಿ ಕರೆನ್ಸಿ, ಎಟಿಎಂ ಕಾರ್ಡ್ ,ಆಧಾರ್ ಕಾರ್ಡ್, ಎಮಿರೆಟ್ಸ್ ಐಡಿ, ಪತ್ನಿಯ ದುಬೈ ಇಸ್ಲಾಮಿಕ್ ಬ್ಯಾಂಕ್ ನ ಎಟಿಎಂ ಕಾರ್ಡ್ , ಪಾಸ್ ಪೋರ್ಟ್ ಇತ್ತು ಎಂದು ಉರ್ವ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.

ಚೇತನ್ ಕುಮಾರ್ ದಂಪತಿ ದುಬೈನಲ್ಲಿದ್ದು ಇತ್ತೀಚೆಗೆ ಊರಿಗೆ ಬಂದಿದ್ದು ಮಾ.12ರ ಇಂದು ಬೆಳಗ್ಗೆ 6.40 ಕ್ಕೆ ದುಬಾಯಿಗೆ ತೆರೆಳಬೇಕಾಗಿತ್ತು, ಕಳ್ಳರು ಕದ್ದು ಪರಾರಿಯಾಗುವ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆಯಾಗಿದೆ. ಉರ್ವ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರ ಪತ್ತೆಗಾಗಿ ಪೋಲಿಸರು ಹುಡುಕಾಟ ಪ್ರಾರಂಭಿಸಿದ್ದಾರೆ.

- Advertisement -

Related news

error: Content is protected !!