- Advertisement -
- Advertisement -
ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಆರೋಪಿಗಳು ಮಾತ್ರ ಘಟನೆ ಹಿಂದಿರುವವರ ಬಗ್ಗೆ ಬಾಯ್ಬಿಡುತ್ತಿಲ್ಲ ಎಂದು ತಿಳಿದುಬಂದಿದೆ.
ಸೆಕ್ಷನ್ 164 ರಡಿ ನಿಮ್ಮ ಹೇಳಿಕೆ ಪಡೆದು ಸಾಕ್ಷಿದಾರರನ್ನಾಗಿ ಮಾಡುತ್ತೇವೆ. ನಂತರ ನಿಮ್ಮನ್ನು ಬಿಟ್ಟುಬಿಡ್ತೇವೆ. ನಿಮಗೆ ಕುಮ್ಮಕ್ಕು ನೀಡಿದವರು ಯಾರು ಎಂದು ಪ್ರಶ್ನೆ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ ಬಂಧಿತರು ಮಾತ್ರ ಘಟನೆ ಹಿಂದಿರುವವರ ಬಗ್ಗೆ ಬಾಯ್ಬಿಡುತ್ತಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಆರೋಪಿಗಳಿಂದ ಸತ್ಯ ಬಾಯ್ಬಿಡಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗಿದೆ.
- Advertisement -