Wednesday, April 17, 2024
spot_imgspot_img
spot_imgspot_img

ವಿವಾಹಿತ ಮಹಿಳೆಯನ್ನು ಕೊಂದು ತಾನೂ ನೇಣಿಗೆ ಶರಣಾದ ಹೂವಿನ ವ್ಯಾಪಾರಿ!!

- Advertisement -G L Acharya panikkar
- Advertisement -

ಸುರತ್ಕಲ್: ಹೂವಿನ ವ್ಯಾಪಾರಿಯೊಬ್ಬ ತನ್ನ ಪರಿಚಯದ ವಿವಾಹಿತ  ಮಹಿಳೆಯೊಬ್ಬರನ್ನು ಮುಕ್ಕದ ತನ್ನ ಬಾಡಿಗೆ ಮನೆಯಲ್ಲಿ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರತ್ಕಲ್​ನ ಕುಳಾಯಿಯಲ್ಲಿ ನಡೆದಿದೆ.

ಮೃತರನ್ನು ಸುರತ್ಕಲ್ ಮುಖ್ಯ ಬಸ್ ನಿಲ್ದಾಣದಲ್ಲಿ ಹೂವಿನ ವ್ಯಾಪಾರಿಯಾಗಿದ್ದ ಕುಳಾಯಿ ರೈಲ್ವೆ ಬ್ರಿಜ್ ಬಳಿಯ ನಿವಾಸಿ ವಸಂತ್ ಕುಮಾರ್ (44) ಹಾಗೂ ಈತನ ಪರಿಚಯದ ರೇಖಾ (42) ಎಂಬ ವಿವಾಹಿತ ಮಹಿಳೆ ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ 3 ಗಂಟೆ ಸುಮಾರಿನ ಬಳಿಕ ಈ ಘಟನೆ ನಡೆದಿರಬೇಕು ಎಂದು ಶಂಕಿಸಲಾಗಿದೆ.

ವಸಂತ್ ಕುಮಾರ್‌ ತನಗೆ ಪರಿಚಯದ ರೇಖಾ ಎಂಬ ವಿವಾಹಿತ ಮಹಿಳೆಯನ್ನು ತನ್ನ ಬಾಡಿಗೆ ಮನೆಗೆ ಮಂಗಳವಾರ ಸಂಜೆ 3 ಗಂಟೆ ಬಳಿ ಕರೆದೊಯ್ದಿದ್ದ ಎನ್ನಲಾಗಿದೆ. ಈಕೆ ಸುರತ್ಕಲ್ ಬಳಿಯ ಬೃಹತ್ ಉದ್ಯಮವೊಂದರ ಟೌನ್ ಶಿಪ್ ನಿವಾಸಿ, ಬೃಹತ್ ಉದ್ಯಮವೊಂದರ ಉದ್ಯೋಗಿಯ ಪತ್ನಿ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ, ಮಂಗಳೂರು ಡಿಸಿಪಿ, ಪಣಂಬೂರು ಎಸಿಪಿಕೆಯು ಬೆಳ್ಳಿಯಪ್ಪ, ಸುರತ್ಕಲ್ ಪಿಐ ಚಂದ್ರಪ್ಪ, ಎಸ್ ಐ ಸುಂದರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!