- Advertisement -
- Advertisement -




ಮಂಗಳೂರು: ಅಂಡರ್ ಆರ್ಮ್ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಯಂಗ್ ಫ್ರೆಂಡ್ಸ್ ಉರ್ವ ತಂಡದ ಮಾಲೀಕ ತಿಲಕ್ ಗುರು ಅವರು ಹೃದಯಾಘಾತದಿಂದ ನಿಧನರಾದರು .
ಅಂಡರ್ ಆರ್ಮ್ ಕ್ರಿಕೆಟ್ನ ಅಂಬಾಸಿಡರ್ ಎಂದೇ ಗುರುತಿಸಿಕೊಂಡಿದ್ದ ತಿಲಕ್ ಗುರು ಅವರು, ಉರ್ವ ಮೈದಾನದಲ್ಲಿ ನಡೆಯುತ್ತಿದ್ದ ಹಲವು ಪಂದ್ಯಾವಳಿಗಳ ಪೋಷಕ, ಮೇಲ್ವಿಚಾರಕ ಹಾಗೂ ತಮ್ಮ ತಂಡದ ನಾಯಕರಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಂಡರ್ ಆರ್ಮ್ ಕ್ರಿಕೆಟ್ಗೆ ನೇರ ಪ್ರಸಾರದ ಪರಿಕಲ್ಪನೆಯನ್ನು ಪರಿಚಯಿಸುವ ಮೂಲಕ ಈ ಕ್ರೀಡೆಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟ ಹೆಗ್ಗಳಿಕೆ ಅವರದ್ದು. ಅಲ್ಲದೆ, ಆಟಗಾರರಿಗೆ ದಿನ ಭತ್ಯೆ ಆಧಾರಿತ ಸಂಭಾವನೆ ನೀಡುವ ವ್ಯವಸ್ಥೆ ಜಾರಿಗೆ ತರುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಕ್ರೀಡೆಯ ಜೊತೆಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕ ಮತ್ತು ಆಯೋಜಕರಾಗಿಯೂ ತಿಲಕ್ ಗುರು ಅವರು ಹೆಸರು ಗಳಿಸಿದ್ದರು. ಅವರ ನಿಧನದಿಂದ ಅಂಡರ್ ಆರ್ಮ್ ಕ್ರಿಕೆಟ್ ವಲಯಕ್ಕೆ ಅಪಾರ ನಷ್ಟ ಉಂಟಾಗಿದೆ.
- Advertisement -








