Monday, June 30, 2025
spot_imgspot_img
spot_imgspot_img

ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟನಿಗೆ ಎನ್ ಕೌಂಟರ್ ಭೀತಿ-ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿರುವ ರೌಡಿಶೀಟರ್ ಆಕಾಶಭವನ ಶರಣ್‌ ಅಲಿಯಾಸ್ ಶರಣ್ ಪೂಜಾರಿ

- Advertisement -
- Advertisement -

ಮಂಗಳೂರು(ಅ.30): ಭೂಗತಪಾತಕಿ ವಿಕ್ಕಿಶೆಟ್ಟಿ ಬಲಗೈ ಬಂಟನಿಗೆ ಎನ್ ಕೌಂಟರ್ ಭೀತಿ ಎದುರಾಗಿದೆ. ರೌಡಿಶೀಟರ್ ಆಕಾಶಭವನ ಶರಣ್ ಗೆ ಎನ್ ಕೌಂಟರ್ ಭೀತಿ ಎದುರಾಗಿದ್ದು. ಮಂಗಳೂರಿನ ರೌಡಿಶೀಟರ್ ಆಕಾಶಭವನ ಶರಣ್‌ ಅಲಿಯಾಸ್ ಶರಣ್ ಪೂಜಾರಿ ಸದ್ಯ ಬೆಂಗಳೂರು ಸೆಂಟ್ರಲ್ ಜೈಲ್ ನಲ್ಲಿದ್ದಾನೆ. ಇತ್ತೀಚೆಗೆ ನಡೆದ ತುಳು ಚಿತ್ರನಟ ಸುರೇಂದ್ರ ಬಂಟ್ವಾಳ ಮರ್ಡರ್ ಕೇಸ್ ನಲ್ಲಿ ಶರಣ್ ನನ್ನು ವಿಚಾರಣೆಗೆ ಬಂಟ್ವಾಳ ಪೊಲೀಸರು ಕರೆ ತರಲಿದ್ದಾರೆ.

ಬಾಡಿ ವಾರಂಟ್ ಪಡೆದು ವಿಚಾರಣೆಗೆ ಪೊಲೀಸರು ಕರೆ ತರಲಿದ್ದಾರೆ ಎಂಬ ಮಾಹಿತಿ ಇದೆ.ಈ ಸಲುವಾಗಿ ವಿಚಾರಣೆಗೆ ಕರೆ ತಂದಾಗ ಎನ್ ಕೌಂಟರ್ ಮಾಡುತ್ತಾರೆ ಎಂಬ ಭೀತಿಯಿಂದ ತನ್ನ ಜೀವಕ್ಕೆ ಅಪಾಯವಿದೆ. ವಿಚಾರಣೆಯಿಂದ ವಿನಾಯಿತಿ ಕೋರಬೇಕು ಎಂದು ಮನವಿ ಪತ್ರ ಒಂದನ್ನು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಬರೆದಿದ್ದಾನೆ ಎಂಬ ಮಾಹಿತಿ ಇದೆ.

- Advertisement -

Related news

error: Content is protected !!