Wednesday, May 22, 2024
spot_imgspot_img
spot_imgspot_img

ಮಾಣಿ: ಅಪರಿಚಿತ ವ್ಯಕ್ತಿಗಳಿಬ್ಬರಿಂದ ಕಳ್ಳತನಕ್ಕೆ ಸಂಚು!

- Advertisement -G L Acharya panikkar
- Advertisement -

ಮಾಣಿ: ಕೊರೋನ ನಿಯಂತ್ರಣಕ್ಕೆ ರಾಜ್ಯ ದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಸಮಯದಲ್ಲಿ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಕಾಪಿಕಾಡುವಿನಲ್ಲಿ ಅನುಮಾನಾಸ್ಪದವಾಗಿ ಅಪರಿಚಿತ ವ್ಯಕ್ತಿಗಳಿಬ್ಬರು ಅಕ್ಟಿವಾ ಸ್ಕೂಟರಲ್ಲಿ ತಿರುಗಾಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಘಟನೆ ನಿನ್ನೆ ರಾತ್ರಿ ವೇಳೆಯಲ್ಲಿ ನಡೆದಿದೆ.

ವಿಟ್ಲ ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಮಾಣಿಯಲ್ಲಿ ಪೋಲಿಸ್ ಪೋಲೀಸ್ ಹೊರಠಾಣೆ ನಿರ್ಮಾಣ ಮಾಡಲು ಸಾರ್ವಜನಿಕರು ಒತ್ತಾಯ ಮಾಡಿದ್ದು, ಎರಡು ಹೆದ್ದಾರಿಗಳು ಸೇರುವ ಮಾಣಿ ಜಂಕ್ಷನ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳ ಕಾಕರ ಕಾಟ ಜಾಸ್ತಿ ಆಗಿದೆ.

ಗೂಡಂಗಡಿಗಳಲ್ಲಿ ಸಣ್ಣ ಪುಟ್ಟ ಕಳ್ಳತನ,ವಂಚನೆ ಪ್ರಕರಣ ಈ ಹಿಂದಿನಿಂದಲೂ ಆಗುತ್ತಿರುತ್ತಿದ್ದು, ಸಣ್ಣ ಪುಟ್ಟ ಕಳ್ಳತನಕ್ಕೆ ಪೋಲೀಸ್ ಠಾಣೆಯ ಮೆಟ್ಟಲು ಹತ್ತುವುದೇ ಇಲ್ಲ. ಈ ಒಂದು ಸಾರ್ವಜನಿಕರ ನಿರ್ಲಕ್ಷ್ಯವೇ ಕಳ್ಳಕಾಕರಿಗೆ ವರದಾನವಾಗಿದೆ ಎಂದು ತಿಳಿದು ಬಂದಿದೆ. ಇನ್ನು ಮುಂದೆ ಈ ಬಗ್ಗೆ ಪೋಲೀಸರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದು ಸದ್ಯದ ಕುತೂಹಲಕ್ಕೆ ಕಾರಣವಾಗಿದೆ. ಆದರೂ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ ಎನ್ನಲಾಗಿದೆ. ರಾಜಕೀಯ ನಾಯಕರ ಇಚ್ಚಾ ಶಕ್ತಿಯ ಕೊರತೆಯಿಂದ ಮಾಣಿಯಲ್ಲಿ ಪೋಲಿಸ್ ಔಟ್ ಪೋಸ್ಟ್ ನಡೆಯಲಿಲ್ಲ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.

- Advertisement -

Related news

error: Content is protected !!