- Advertisement -
- Advertisement -


ಮಾಣಿ: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ವೈಎಸ್ ಮಾಣಿ ಸರ್ಕಲ್ ಸಮಿತಿ ವತಿಯಿಂದ ಸದಸ್ಯತ್ವ ಸಡಗರದ ಸರ್ಕಲ್ ಕಾರ್ಯಾಗಾರ ಮತ್ತು ಪೋಸ್ಟರ್ ಪ್ರದರ್ಶನ ಕಾರ್ಯಕ್ರಮವು ಮಾಣಿ ದಾರುಲ್ ಇರ್ಶಾದ್ ಮದ್ರಸಾ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮಲ್ಲಿ ಹೈದರ್ ಸಖಾಫಿ ಶೇರಾ ಅಧ್ಯಕ್ಷತೆ ವಹಿಸಿ ದುಆ ನಡೆಸಿದರು. ರಫೀಕ್ ಮದನಿ ಪಾಟ್ರಕೋಡಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಡಿವಿಶನ್ ನಾಯಕಅಬ್ದುಲ್ ಅಝೀಝ್ ಚೆನ್ನಾರ್ ಕಾರ್ಯಾಗಾರ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಕಾಸಿಂ ಮುಸ್ಲಿಯಾರ್ ಸೂರ್ಯ,ಸಂಶುದ್ದೀನ್ ಮಿತ್ತೂರು,ಸಾಜಿದ್ ಪಾಟ್ರಕೋಡಿ, ಉಮ್ಮರ್ ಫಾರೂಕ್ ಸೂರಿಕುಮೇರು, ಕಲಂದರ್ ಬುಡೋಳಿ, ಮಜೀದ್ ಪಾಟ್ರಕೋಡಿ,ಅಶ್ರಫ್ ಬುಡೋಳಿ,ಅಬ್ದುಲ್ ಹಮೀದ್ ಶೇರಾ,ಜಲೀಲ್ ಮುಸ್ಲಿಯಾರ್ ಕೊಡಾಜೆ, ಝುಬೈರ್ ಪಾಟ್ರಕೋಡಿ ಸಹಿತ ಹಲವಾರು ವಿವಿಧ ಹುದ್ದೆಯ ನಾಯಕರುಗಳು ಉಪಸ್ಥಿತರಿದ್ದರು.
ಉಮರುಲ್ ಫಾರೂಕ್ ಹನೀಫಿ ಪರ್ಲೊಟ್ಟು ಸ್ವಾಗತಿಸಿದರು, ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
- Advertisement -