ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಹಾಗೂ ಸೂರಿಕುಮೇರು ಶಾಖೆ ವತಿಯಿಂದ ಸೆಪ್ಟೆಂಬರ್ 19 ಶನಿವಾರ ಎಸ್ಸೆಸ್ಸೆಫ್ ಧ್ವಜ ದಿನ ಆಚರಣೆಯನ್ನು ಸೂರಿಕುಮೇರು ಸಂಜರಿ ಕಾಂಪ್ಲೆಕ್ಸ್ ಆವರಣದಲ್ಲಿ ನಡೆಸಲಾಯಿತು.
ಎಸ್ವೈಎಸ್ ಮಾಣಿ ಸೆಂಟರ್ ನಾಯಕರಾದ ಅಬ್ದುಲ್ ರಝಾಕ್ ಮದನಿ ಕಾಮಿಲ್ ಸಖಾಫಿ ಸೂರಿಕುಮೇರು ದುಆ ನೆರವೇರಿಸಿ ಭಾಷಣ ಮಾಡಿದರು,ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷ ಸ್ವಾದಿಖ್ ಸಖಾಫಿ ಅಲ್ ಮುಈನೀ ಗಡಿಯಾರ್ ಪ್ರಾಸ್ತಾವಿಕ ಭಾಷಣ ನಡೆಸಿಕೊಟ್ಟರು.
ಮುಸ್ತಫಾ ಬುಡೋಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು,ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ನಾಯಕರಾದ ಮುಬಶ್ಶಿರ್,ನೌಶಾದ್ ಉಮ್ಮರ್,ಜಾಬಿರ್,ಇಮ್ರಾನ್,ಫಾರೂಕ್ ಬದ್ರಿಯಾಗ್ರೌಂಡ್,ಸವಾದ್ ಮಾಣಿ,ಮುನೀರ್ ಪಟ್ಲಕೋಡಿ,ಹಾಗೂ ಎಸ್ವೈಎಸ್ ನಾಯಕರಾದ ಸುಲೈಮಾನ್ ಸೂರಿಕುಮೇರು, ಹಂಝ ಕಾಯರಡ್ಕ,ಸಲೀಂ ಮಾಣಿ,ಯೂಸುಫ್ ಹಾಜಿ,ಅಬ್ದುಲ್ ಫತ್ತಾಹ್ ಹಳೀರ,ಮುಂತಾದವರು ಹಾಜರಿದ್ದರು,ಧ್ವಜಾರೋಹಣದ ಬಳಿಕ ಇಸಾಕ್ ಮಾಣಿ,ಜಮಾಲ್ ಮಾಣಿ ನೇತ್ರತ್ವದಲ್ಲಿ ಕ್ರಾಂತಿ ಗೀತೆ ಹಾಡಲಾಯಿತು,ಮುಈನುದ್ದೀನ್ ಮಾಣಿ ಧನ್ಯವಾದಗೈದರು.