ವಿಟ್ಲ: ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ಮೇಲ್ದರ್ಜೆಗೆ ಏರಿದರಿಂದ ವಿಟ್ಲ ಠಾಣೆಗೆ ಪೊಲೀಸ್ ಇನ್ಸ್ಪೆಕ್ಟರ್ ನೇಮಕಗೊಂಡಿದ್ದಾರೆ. ಠಾಣೆಗೆ ಇನ್ಸ್ಪೆಕ್ಟರ್ ಆಗಿ ನಾಗರಾಜ್ ಹೆಚ್ ಇ ನೇಮಕಗೊಂಡಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ನೂತನವಾಗಿ ಬಂದ ಪೊಲೀಸ್ ಅಧಿಕಾರಿಯನ್ನು ಶ್ರೀ ಶಾರದಾ ಯುವ ವೇದಿಕೆ ಮಾಣಿ ಇದರ ಸದಸ್ಯರು ಸ್ವಾಗತಿಸಿದರು.
ಅಂತೆಯೇ ಸಬ್ ಇನ್ಸ್ಪೆಕ್ಟರ್ ಆಗಿ ವಿಟ್ಲದಲ್ಲಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡ ವಿನೋದ್ ಕುಮಾರ್ ರೆಡ್ಡಿ ಅವರಿಗೆ ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿದರು.
ಮುಖ್ಯ ಅತಿಥಿಯಾಗಿ ಹಿರಿಯರಾದ ಅನಂತಪ್ರಭು ನೇರಳಕಟ್ಟೆ ಆಗಮಿಸಿದ್ದರು. ಈ ವೇಳೆ ಶ್ರೀ ಶಾರದಾ ಯುವ ವೇದಿಕೆ ಮಾಣಿ ಇದ ಅಧ್ಯಕ್ಷ ಭರತ್ ಶೆಟ್ಟಿ, ಗೌರವಾಧ್ಯಕ್ಷ ದಿವಾಕರ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಮೋಹನ್, ಕಾರ್ಯದರ್ಶಿ ನರಸಿಂಹ, ಕೋಶಾಧಿಕಾರಿ ಪ್ರಕಾಶ್ ಆಳ್ವ, ಸಂಘದ ಹರೀಶ್ ಕುಲಾಲ್, ಚಂದ್ರ, ಪ್ರಜ್ವಲ್ ಶೆಟ್ಟಿ, ಪ್ರಮೀತ್ ಶೆಟ್ಟಿ, ದಿವಾಕರ್ ಕುಲಾಲ್, ರಾಜೇಶ್ ಕುಲಾಲ್ ಕೊಪ್ಪಳ, ರಾಜೇಶ್ ಶೆಟ್ಟಿ ತೋಟ, ನವೀನ್ ಕುಮಾರ್ ವಿಠಲ ಕೊಡಿ, ಕೇಶವ ಪೂಜಾರಿ ಕಾಪಿಕಾಡು ಸೇರಿದಂತೆ ಸಂಘದ ಸರ್ವಸದಸ್ಯರು ಉಪಸ್ಥಿತರಿದ್ದರು.