- Advertisement -
- Advertisement -
ನರಿಕೊಂಬು: ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ನರಿಕೊಂಬು, ಪಾಣೆಮಂಗಳೂರು ಇಲ್ಲಿ ದಿನಾಂಕ 03.03.2024ನೇ ಭಾನುವಾರದಿಂದ 12.03.2024ನೇ ಮಂಗಳವಾರದ ವರೆಗೆ ಶ್ರೀ ಗಣಪತಿ ಮತ್ತು ಶ್ರೀ ದುರ್ಗಾ ಸಾನ್ನಿಧ್ಯಗಳ ಪುನಃಪ್ರತಿಷ್ಠೆ ಹಾಗೂ ಭಯಂಕೇಶ್ವರ ಸದಾಶಿವ ದೇವರಿಗೆ ಸಹಿತ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವ ಹಾಗೂ ಜಾತ್ರಾಮಹೋತ್ಸವವು ನಡೆಯಲಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವೈದಿಕ ವಿಧಿವಿಧಾನಗಳೊಂದಿಗೆ ‘ಕೀರ್ತಿಶೇಷ ಶ್ರೀ ಬಿ.ಗಣಪತಿ ಸೋಮಾಯಾಜಿ’ ವೇದಿಕೆಯಲ್ಲಿ ವೈವಿಧ್ಯಮಯ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಬಹ್ಮಕಲಶ ಅಂಗವಾಗಿ ಮಾ.5ರಂದು ಸಂಜೆ 2.30ಕ್ಕೆ ನರಿಕೊಂಬು ದೊಂಪದ ಬಳಿ ನಾಲೈತ್ತಾಯ ದೈವಸ್ಥಾನದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜ ಚಾಲನೆ ನೀಡಲಿದ್ದಾರೆ ಎಂದು ವ್ಯವಸ್ಥಾಪನಾ ಮತ್ತು ಜೀರ್ಣೋದ್ಧಾರ ಸಮಿತಿ ಮತ್ತು ಬ್ರಹ್ಮಕಲಶ ಮಹೋತ್ಸವ ಸಮಿತಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -