- Advertisement -
- Advertisement -


ವಿಟ್ಲ: ದಿನಾಂಕ 08-03-2024ನೇ ಶುಕ್ರವಾರ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಲಕ್ಷ ಬಿಲ್ವಾರ್ಚನೆ, ಏಕಾದಶ ರುದ್ರಾಭಿಷೇಕ ರಂಗಪೂಜೆ ಹಾಗೂ ಶ್ರೀ ದೇವರ ಬಲಿ ಉತ್ಸವ ಜರಗಲಿರುವುದು.
ಸಂಜೆ ಗಂಟೆ 6:30ರಿಂದ ರಾತ್ರಿ 8:30ರವರೆಗೆ ಶ್ರೀ ಅರವಿಂದ ಆಚಾರ್ಯ ಮಾಣಿಲ ಮತ್ತು ಬಳಗದವರಿಂದ “ಭಜನ್ ಸಂಧ್ಯಾ” ಕಾರ್ಯಕ್ರಮವು ನಡೆಯಲಿದೆ.ರಾತ್ರಿ ಗಂಟೆ 8.30ರಿಂದ ಹಿಂದೂ ಯುವ ಸೇನೆ ವಿಟ್ಲ ಅರ್ಪಿಸುವ ಶಾರದಾ ಆರ್ಟ್ಸ್ ಕಲಾವಿದರು (ರಿ.), ಮಂಜೇಶ್ವರ ಅಭಿನಯಿಸಿರುವ “ಕಥೆ ಎಡ್ಡೆಂಡು” ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿರುವುದು. ರಾತ್ರಿ ಗಂಟೆ 12:00ರ ನಂತರ ವಿವಿಧ ಭಜನಾ ಮಂಡಳಿಯವರಿಂದ ಭಜನೋತ್ಸವ ಜರಗಲಿರುವುದು.
ದಿನಾಂಕ 09-03-2024ನೇ ಶನಿವಾರ ಪ್ರಾತಃಕಾಲ 4:00 ಗಂಟೆಗೆ ಶ್ರೀ ದೇವರ ಉತ್ಸವ ಬಲಿ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ ಜರಗಲಿರುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


- Advertisement -