Friday, April 26, 2024
spot_imgspot_img
spot_imgspot_img

ಮರ್ಯಾದಾ ಹತ್ಯೆಗೆ ಯುವತಿ ಬಲಿ.

- Advertisement -G L Acharya panikkar
- Advertisement -

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನ ಕುದೂರಿನ ಬೆಟ್ಟಹಳ್ಳಿಯಲ್ಲಿ ಮರ್ಯಾದಾ ಹತ್ಯೆ ನಡೆದಿದೆ.
ಅನ್ಯ ಕೋಮಿನ ಯುವಕನನ್ನು ಪ್ರೀತಿಸಿದ್ದನ್ನು ಸಹಿಸಲಾರದೆ ಆಕೆಯ ತಂದೆ ಹಾಗೂ ತಮ್ಮ ಸೇರಿ ಕೊಲೆಗೈದಿರುವ ಘಟನೆ ರಾಮನಗರದ ಮಾಗಡಿ ತಾಲೂಕಿನ ಕುದೂರಿನಲ್ಲಿ ನಡೆದಿದೆ.


ಮೃತ ಯುವತಿಯ ತಂದೆ ಕೃಷ್ಣಪ್ಪ (46), ತಮ್ಮ ಯೋಗೇಶ್ (19) ಆಕೆಯ ಸಹೋದರ ಸಂಬಂಧಿ ಚೇತನ್ ನನ್ನು ಪೊಲೀಸರು ಬಂಧಿಸಿದ್ದಾರೆ.


ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ ಹೇಮಲತಾ (19) ಅನ್ಯಕೋಮಿನ ಯುವಕ ತರಕಾರಿ ಮಾರಾಟಗಾರನನ್ನು ಪ್ರೀತಿಸುತ್ತಿದ್ದಳು. ಇದನ್ನು ಸಹಿಸದ ಪೋಷಕರು ಆತನನ್ನು ಪ್ರೀತಿಸದಂತೆ ಬುದ್ಧಿವಾದ ಹೇಳಿದ ಮೇಲೂ ಆಕೆ ಆತನಿಂದ ದೂರವಾಗದ ಕಾರಣ ಕೋಪಗೊಂಡ ಆಕೆಯ ತಂದೆ, ತಮ್ಮ ಹಾಗೂ ತಮ್ಮನ ಸ್ನೇಹಿತರು ಸೇರಿ ಕೊಲೆ ಮಾಡಿ ತಮ್ಮ ಸಂಬಂಧಿಕರ ಜಮೀನಿನಲ್ಲಿಯೇ ಆಕೆಯ ಬಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿ, ಹಳ್ಳದಲ್ಲಿ ಹಾಕಿ ಮಣ್ಣಿನಿಂದ ಮುಚ್ಚಿದ್ದರು. ಬಳಿಕ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಬಿಂಬಿಸುವ ಯತ್ನ ನಡೆಸಿದ್ದರು. ಮಗಳು ಕಾಣೆಯಾಗಿದ್ದಾಳೆಂದು ಕುದೂರು ಠಾಣೆಯಲ್ಲಿ ದೂರು ನೀಡಿದ್ದರು.

ಅ.8 ರಂದು ಮಗಳು ಕಾಣೆಯಾಗಿದ್ದಾಳೆಂದು ಅ.9 ರಂದು ದೂರು ನೀಡಿದ್ದು, ಅ.10 ರಂದು ಆಕೆಯ ಶವ ದೊಡ್ಡಪ್ಪನ ಜಮೀನಿನಲ್ಲಿಯೇ ಪತ್ತೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಕುದೂರಿನ ತರಕಾರಿ ವ್ಯಾಪಾರ ಮಾಡುತ್ತಿದ್ದ ಅನ್ಯ ಜಾತಿಯ ಯುವಕನನ್ನ ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಳು. ಇದೇ ವಿಚಾರವಾಗಿ ಹೇಮಲತಾ ಹಾಗೂ ಅವರ ಕುಟುಂಬಸ್ಥರ ಮದ್ಯೆ ಜಗಳ ನಡೆಯುತ್ತಿತ್ತು. ಇತ್ತೀಚೆಗೆ ಆಕೆಗೆ ಆನ್ ಲೈನ್ ಕ್ಲಾಸ್ ಅಟೆಂಡ್ ಮಾಡಲು ಮೊಬೈಲ್ ಕೊಡಿಸಲಾಗಿತ್ತು. ಮೊಬೈಲ್ ಸಿಕ್ಕ ಬಳಿಕ ಪ್ರಿಯತಮನ ಜತೆ ಸಂಪರ್ಕ ಹೆಚ್ಚಾಗಿತ್ತು. ಈ ವಿಚಾರ ಆಕೆಯ ಅಣ್ಣ ಆರೋಪಿ ಚೇತನ್ ಗೆ ತಿಳಿದಿತ್ತು. ಕುಟುಂಬಸ್ಥರಿಗೆ ಮಾಹಿತಿ ಕೊಟ್ಟ ಬಳಿಕ ನಿನ್ನ ಜತೆ ಮಾತನಾಡಬೇಕು ಎಂದು ತಮ್ಮ ಜಮೀನಿನ ಬಳಿ ಕರೆದುಕೊಂಡು ಹೋಗಿದ್ದರು. ಆ ವೇಳೆಯಲ್ಲೂ ಅವರ ಮಾತಿಗೆ ಬಗ್ಗದ ಹೇಮಲತಾ ನಾನು ಮದುವೆಯಾಗುವುದಾದರೆ ಅವನನ್ನೇ ಎಂದು ಹಠ ಹಿಡಿದಳು. ಇದರಿಂದ ಕೋಪಗೊಂಡ ಆರೋಪಿ ಚೇತನ್ ಆಕೆಯ ಕೆನ್ನೆಗೆ ಬಲವಾಗಿ ಹೊಡೆದಿದ್ದಾನೆ. ಆ ಸಮಯದಲ್ಲಿ ಕೆಳಕ್ಕೆ ಬಿದ್ದ ಆಕೆಯ ತಲೆಗೆ ಬಲವಾದ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಳು. ಬಳಿಕ ಪ್ರಕರಣವನ್ನು ಮುಚ್ಚಿಹಾಕಬೇಕು ಎಂದು ಅಡಕೆ ಸಸಿಗಳನ್ನ ನಡೆಲು ತೋಡಿದ್ದ ಹಳ್ಳದಲ್ಲಿ ಹಾಕಿ ಮುಚ್ಚಿದ್ದರು.

- Advertisement -

Related news

error: Content is protected !!