Friday, June 27, 2025
spot_imgspot_img
spot_imgspot_img

ಶ್ರೀ ಮಂತ್ರದೇವತಾ ಕ್ಷೇತ್ರ ಸಾನಿಧ್ಯ – ಕಟ್ಟೆಮಾರಿನ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ

- Advertisement -
- Advertisement -

ಕಲ್ಲಡ್ಕ: ಶ್ರೀ ಮಂತ್ರದೇವತಾ ಸೇವಾ ಟ್ರಸ್ಟ್, ಅಖಿಲ ಕರ್ನಾಟಕ ರಾಜ ಕೇಸರಿ ಟ್ರಸ್ಟ್ (ರಿ), ಶ್ರೀ ದೇವಿ ಆಪ್ಟಿಕಲ್ಸ್ ಉಪ್ಪಿನಂಗಡಿ ಇವುಗಳ ಜಂಟಿ ಆಶ್ರಯದಲ್ಲಿ ಮಂಗಳೂರಿನ ನುರಿತ ಕಣ್ಣಿನ ತಜ್ಞರಾದ ಡಾ.ಸುಧೀಂದ್ರರಾವ್ ಎನ್. ಇವರ ನೇತೃತ್ವದಲ್ಲಿ ಶ್ರೀ ಮಂತ್ರ ದೇವತಾ ಸಾನಿಧ್ಯ ಶ್ರೀ ಕ್ಷೇತ್ರ ಕಟ್ಟೆಮಾರು ಇಲ್ಲಿನ ಧರ್ಮದರ್ಶಿಗಳಾದ ಮನೋಜ್ ಕುಮಾರ್ ಕಟ್ಟೆಮಾರ್‌ರವರ ಹುಟ್ಟುಹಬ್ಬದ ಪ್ರಯುಕ್ತ ರಾಜ ಕೇಸರಿ ಸಂಘಟನೆಯ 538 ಸೇವಾ ಯೋಜನೆಯ ಬೃಹತ್ ಉಚಿತ ನೇತ್ರ ತಪಾಸಣಾ ಶಿಬಿರ ಶ್ರೀ ಮಂತ್ರದೇವತಾ ಸಾನಿಧ್ಯ ಶ್ರೀ ಕ್ಷೇತ್ರ ಕಟ್ಟೆಮಾರ್‌ನಲ್ಲಿ ನಡೆಯಿತು.

ಶಿಬಿರವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಶಾಸಕ ರಾಜೇಶ್ ನಾೖಕ್‌ ಉಳಿಪ್ಪಾಡಿಗುತ್ತು ಇವರ ಅಧ್ಯಕ್ಷತೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ ನುರಾರು ಜನರು ಕಣ್ಣಿನ ತಪಾಸಣೆ ನಡೆಸಿ ನುರಿತ ತಜ್ಞರಿಂದ ಶಿಬಿರದ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ತಾರನಾಥ್ ಸಾಲ್ಯಾನ್, ಜಗದೀಶ್ ಬಜ್ಜಾರ್, ಪ್ರಭಾಕರ್ ಶೆಟ್ಟಿ ಬೈದರಡ್ಕ, ಮಿಥುನ್ ಪೂಜಾರಿ, ರಾಜೇಶ್ ಕಣ್ಣೂರ್, ದೀಪಕ್ ಜಿ ಉಪಸ್ಥಿತರಿದ್ದರು. ಪ್ರೇಮ್ ರಾಜ್ ರೋಷನ್ ಸಿಕ್ವೆರ ಸ್ವಾಗತಿಸಿ, ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಧನ್ಯವಾದಗೈದರು.

- Advertisement -

Related news

error: Content is protected !!