Monday, April 29, 2024
spot_imgspot_img
spot_imgspot_img

ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಹೆಸರಲ್ಲಿ ಲಕ್ಷಾಂತರ ಹಣ ವಂಚನೆ; ಯುವತಿಯ ಬಂಧನ

- Advertisement -G L Acharya panikkar
- Advertisement -

ಸ್ಯಾಂಡಲ್‌ವುಡ್ ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ, ಬಾಲನಟಿ ವಂಶಿಕಾ ಹೆಸರು ಬಳಸಿ ಮಹಿಳೆಯೊಬ್ಬಳು ವಂಚನೆ ಮಾಡಿರುವ ಆರೋಪದ ಮೇಲೆ ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯಶಸ್ವಿನಿ ಜೊತೆ ಮೋಸ ಹೋಗಿರುವ ಇತರರಿಂದ ನಿಶಾ ವಿರುದ್ಧ ದೂರು ದಾಖಲಿಸಲಾಗಿದೆ. ಸದ್ಯ ಆರೋಪಿ ನಿಶಾರನ್ನ ಪೊಲೀಸರು ಬಂಧಿಸಿದ್ದಾರೆ.

ಮಕ್ಕಳ ಟ್ಯಾಲೆಂಟ್ ಶೋ, ಮಕ್ಕಳ ಮಾಡೆಲಿಂಗ್, ಇವೆಂಟ್ ಮ್ಯಾನೇಜ್‌ಮೆಂಟ್ ನಡೆಸುತ್ತೇನೆ ಎಂದು ಹೇಳಿ ಮಕ್ಕಳ ಪೋಷಕರಿಂದ ಲಕ್ಷಾಂತರ ರೂ. ಹಣವನ್ನು ನಿಶಾ ನಂಬಿಸಿ ದೋಚಿದ್ದಾರೆ ಎನ್ನಲಾಗುತ್ತಿದೆ. ಸಾಕಷ್ಟು ಜನರಿಂದ ಹಣ ಪಡೆದು ಮೋಸ ಹೋದ ಕೆಲವರು ನಿಶಾರ ವಿರುದ್ಧ ದೂರು ನೀಡುವ ಮೂಲಕ ಕಿಡಿಕಾರಿದ್ದಾರೆ. ಮಾಸ್ಟರ್ ಆನಂದ್‌ರ ಪುತ್ರಿ ವಂಶಿಕಾ ಹೆಸರು ಹೇಳಿಕೊಂಡು ಸುಮಾರು 40 ಲಕ್ಷ ರೂ. ಹಣವನ್ನು ಪಡೆದುಹಲವರಿಗೆ ನಿಶಾ ನರಸಪ್ಪ ಮೋಸ ಮಾಡಿದ್ದಾರೆ ಎನ್ನಲಾಗಿದೆ. ಮೋಸಕ್ಕೆ ಒಳಗಾದವರು, ವಂಶಿಕಾ ತಾಯಿ ಯಶಸ್ವಿನಿ ಆನಂದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನನಗೆ ಇನ್ಸ್ಟಾಗ್ರಾಂ ಖಾತೆಯ ಮೂಲಕ ನಿಶಾ ನರಸಪ್ಪ ಪರಿಚಯ ಆದರು. ಒಂದಷ್ಟು ಇವೆಂಟ್‌ಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವೆ. ಆಕೆ ಗ್ರೂಪ್‌ನಲ್ಲಿ ಅವರೊಬ್ಬರೇ ಗೊತ್ತಿತ್ತು. ಮೊದಲು ಆಕೆ ಕೆಲಸಗಳು ಜನ್ಯೂನ್ ಆಗಿತ್ತು. ಆರೇಳು ತಿಂಗಳ ಬಳಿಕ ಒಂದಷ್ಟು ಸಮಸ್ಯೆ ಆಗಿತ್ತು. ನಿಶಾ ಜೊತೆ ಕೆಲಸ ಮಾಡಿದವರೆಲ್ಲಾ ನೆಗೆಟಿವ್ ಕಾಮೆಂಟ್ ಮಾಡುತ್ತಿದ್ದರು. ಇದನ್ನು ನಿಶಾ ಗಮನಕ್ಕೆ ತಂದಿದ್ದೆ, ಹಾಗಾಗಿ ಆಕೆ ನನ್ನ ಬಳಿ ಮಾತಾನಾಡೋದನ್ನ ನಿಲ್ಲಿಸಿದರು.

ಇನ್​ಸ್ಟಾಗ್ರಾಂ ಲೈವ್​ಗೆ ಬಂದು ಈ ಸಂಬಂದ ವಂಶಿಕಾ ತಾಯಿ ಯಶಸ್ವಿನಿ ಸ್ಪಷ್ಟನೆ ನೀಡಿದ್ದಾರೆ. ನಿಶಾ ನರಸಪ್ಪ ನಮಗೆ ಇನ್​ಸ್ಟಾಗ್ರಾಂ ಮೂಲಕ ಪರಿಚಯ. ಅವರು ಮಕ್ಕಳ ಪ್ರತಿಭೆ ಪ್ರೋತ್ಸಾಹಿಸಲು ಎಸ್​ಎನ್​ ಪ್ರೊಡಕ್ಷನ್​ ಆರಂಭಿಸಿದ್ದಾಗಿ ಹೇಳಿದ್ದರು. ನಾವು ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುತ್ತಿರುವ ಈ ವೇದಿಕೆ ಸಾಥ್​ ನೀಡಿದ್ದೆವು. ಹೀಗಾಗಿ ಈ ಖಾತೆಯನ್ನು ನಾವು ಪ್ರಮೋಟ್ ಮಾಡಿದ್ದು ನಿಜ. ಆದರೆ ಕ್ರಮೇಣ ನಮಗೆ ಅನೇಕರು ಮೆಸೇಜ್​ ಮಾಡಲು ಆರಂಭಿಸಿದ್ದರು. ಆಗ ನಾವು ನಿಶಾ ಜೊತೆ ಮಾತನಾಡಿ ಇದರಲ್ಲಿ ನಮ್ಮನ್ನು ಸೇರಿಸಬೇಡಿ. ನಾವು ಇನ್ಮೇಲೆ ನಿಮ್ಮ ಪೇಜ್​ ಪ್ರಮೋಟ್​ ಮಾಡೋದಿಲ್ಲ ಎಂದೂ ಸಹ ನಾವು ಅವರಿಗೆ ಹೇಳಿದ್ದೆವು.

ಹೀಗಾಗಿ ಕಳೆದ ಆರು ತಿಂಗಳಿಂದ ಈ ಕಂಪನಿಯ ಪ್ರಮೋಷನ್​ ಕಾರ್ಯವನ್ನು ನಾವು ನಿಲ್ಲಿಸಿದ್ದೆವು. ಆದರೆ ನಿಶಾ ನನ್ನ ಮಗಳ ಹೆಸರಲ್ಲಿ ಪೋಷಕರಿಂದ ಲಕ್ಷಗಟ್ಟಲೇ ಹಣ ಪಡೆದಿದ್ದಾರೆ ಎಂಬುದು ಮಕ್ಕಳ ಪೋಷಕರಿಂದ ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.

ನಿಶಾ ನರಸಪ್ಪಗೆ ವಂಚನೆಯೇ ಉದ್ಯೋಗವಾಗಿತ್ತು. ವಂಶಿಕಾ ಮಾತ್ರವೇ ಅಲ್ಲದೆ ಚಿತ್ರರಂಗದ ಹಲವರ ಹೆಸರಿನಲ್ಲಿ ಹಣ ಹಲವರಿಂದ ಹಣ ಪಡೆದಿದ್ದ ನಿಶಾ ಆ ನಂತರ ಹಣ ಪಡೆದವರ ಕರೆಗಳನ್ನು ರಿಸೀವ್ ಮಾಡುತ್ತಿರಲಿಲ್ಲವಂತೆ, ಕರೆ ಮಾಡಿದರೂ ದರ್ಪದಿಂದ ಮಾತನಾಡುತ್ತಿದ್ದರಂತೆ. ಹೀಗೆ ವಂಚನೆ ಹಣದಿಂದಲೇ ಐಶಾರಾಮಿ ಜೀವನವನ್ನು ನಿಶಾ ನರಸಪ್ಪ ನಡೆಸುತ್ತಿದ್ದರು. ಆದರೆ ಈಗ ಬಂಧನಕ್ಕೆ ಒಳಗಾಗಿದ್ದಾರೆ.

- Advertisement -

Related news

error: Content is protected !!