- Advertisement -
- Advertisement -
ಕೊಲಂಬೋ: ಮಿಸೆಸ್ ಶ್ರೀಲಂಕಾ ಸ್ಪರ್ಧೆಯಲ್ಲಿ ಗೆದ್ದ ಸ್ಪರ್ಧಿಯ ತಲೆಯಿಂದ ಕಿರೀಟ ಕಿತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದಿನ ಮಿಸೆಸ್ ಶ್ರೀಲಂಕಾ ಕ್ಯಾರಲೈನ್ ಜೂರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಶಸ್ತಿ ನೀಡಲು ಆಗಮಿಸಿದ್ದ ಜೂರಿ, ಸ್ಪರ್ಧೆಯಲ್ಲಿ ಗೆದ್ದಿರುವ ಪುಷ್ಫಿಕಾ ಡಿ ಸಿಲ್ವಾ ವಿಚ್ಛೇಧನ ಪಡೆದಿದ್ದಾರೆ. ಇದು ಸ್ಪರ್ಧೆಯ ನಿಯಮಾವಳಿಗೆ ವಿರುದ್ದವಾಗಿದೆ.
ಇದರಿಂದಾಗಿ ಸೆಕಂಡ್ ರನ್ನರ್ ಅಫ್ ಗೆ ಪ್ರಶಸ್ತಿ ದೊರೆಯಬೇಕು ಎಂದು ಹೇಳಿ, ಪುಷ್ಪಿಕಾ ಅವರ ತಲೆ ಮೇಲೆ ಇದ್ದ ಕಿರೀಟವನ್ನು ಬಲವಂತವಾಗಿ ಕಿತ್ತುಕೊಂಡಿದ್ದರು. ಈ ವೇಳೆ ಅವರಿಗೆ ಗಾಯಗಳಾಗಿತ್ತು.
- Advertisement -