ಶಿಷ್ಯನ ಪುಂಡಾಟಿಕೆಗೆ ಸಂಸದ ಬ್ರಿಜೇಶ್ ಚೌಟ ಮೌನ; ಸಾಮಾಜಿಕ ಜಾಲತಾಣದಲ್ಲಿ ವೈರಲ್….!


ಮಂಗಳೂರು: ಕುಡ್ಲ ಸಂಸ್ಕೃತಿ ಪ್ರತಿಷ್ಠಾನದ ಸ್ಟ್ರೀಟ್ ಫುಡ್ ಫೆಸ್ಟ್ ನಡೆಯುತ್ತಿದ್ದು ಜನಪ್ರಿಯ, ಪ್ರಭಾವಿ ಬಿಜೆಪಿ ನಾಯಕ, ಮಾಜಿ ರಾಜ್ಯಾಧ್ಯಕ್ಷ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಜನಸ್ನೇಹಿ ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ ಅತ್ಯುತ್ತಮ ಕಾರ್ಯಕ್ರಮ ಸಂಯೋಜನೆಗೊಂಡಿದ್ದು, ಶಾಸಕ ವೇದವ್ಯಾಸ ಕಾಮತ್ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮದ ಸ್ಥಳಕ್ಕೆ ಹಾಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಬಂದಿದ್ದರು.
ಆದರೆ ಸಂಘಟಕರು, ಶಾಸಕರು ಎಷ್ಟೇ ಕರೆದರು ಒತ್ತಾಯ ಮಾಡಿದರೂ ವೇದಿಕೆ ಮೇಲೇರಿ ಸ್ಮರಣಿಕೆಯೊಂದನ್ನು ಮಂಗಳೂರಿನ ಜನತೆಯ ಪ್ರತಿನಿಧಿಯಾಗಿರುವ ಸಂಸದರಿಗೆ ನೀಡಲು ಮುಂದಾದಗ ನಿರಾಕರಿಸುತ್ತಿದ್ದರು. ಇದು ಅಲ್ಲಿ ಸೇರಿದ್ದ ಸ್ಥಳೀಯ ಬಿಜೆಪಿ ಮುಖಂಡರೂ ಸೇರಿದಂತೆ ಸಾರ್ವಜನಿಕರಲ್ಲಿ ಕುತೂಹಲ ಮೂಡಿಸುವಂತೆ ಮಾಡಿತ್ತು, ಮಾಜಿ ಸಂಸದರ ನೇತೃತ್ವದ ಕಾರ್ಯಕ್ರಮ ಎಂದು ಹಾಲಿ ಸಂಸದರು ನಿರಾಕರಣೆ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆ ಮಾಡುವಂತೆ ಮಾಡಿತ್ತು, ಅಷ್ಟರಲ್ಲಿ ಸಂಸದರ ಜೊತೆ ಇದ್ದ ಪುಡಿ ರಾಜಕೀಯ ಪುಡಾರಿಯಂತೆ ಫೋಸ್ ಕೊಡುವ ಸಾಕ್ಷತ್ ಶೆಟ್ಟಿ ಕಾವೂರು ಎಂಬ ಬ್ರಿಜೇಶ್ ಬಣದ ವ್ಯಕ್ತಿಯೊಬ್ಬ ಶಾಸಕರ ಕುರಿತೇ ನೇರವಾಗಿ ಹಿಯಾಳಿಸಿ, ಮೂದಲಿಸಿ, ಅವಾಚ್ಯ ಶಬ್ದದಲ್ಲಿ ನಿಂದಿಸಿದ ಘಟನೆ ನಡೆಯಿತು.
ವಿಪರ್ಯಾಸವೆಂದರೆ ಜೊತೆಗೆ ಆತನನ್ನು ಕರೆದುಕೊಂಡು ಬಂದ ಬಿಜೆಪಿ ಸಂಸದ ಕ್ಯಾ. ಬ್ರಿಜೇಶ್ ಔಟ ತಮ್ಮದೇ ಪಕ್ಷದ ಹಿರಿಯ ಶಾಸಕರೊಬ್ಬರಿಗೆ ತನ್ನ ಮುಂದೆಯೇ ನಿಂದಿಸುತ್ತಿದ್ದಾಗ ಕೈಕಟ್ಟಿ ನಿಂತಿದ್ದರು ಎಂಬುದು ಬಹಳಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕ್ಯಾ. ಚೌಟ ಬೇಕು ಬೇಕೆಂದೆ ಆತನ್ನು ಕರೆದುಕೊಂಡು ಬಂದು ಶಾಸಕರನ್ನು ಉದ್ದೇಶಪೂರ್ವಕವಾಗಿ ಅಪಮಾನ ಮಾಡಿದ್ರಾ ಎನ್ನುವ ಪಶ್ನೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.