Sunday, June 29, 2025
spot_imgspot_img
spot_imgspot_img

ಮೂಡುಬಿದಿರೆ: ಶಾಂಭವಿ ನದಿಯಲ್ಲಿ ಮುಳುಗಿ ನಾಲ್ವರ ಸಾವು.!

- Advertisement -
- Advertisement -

ಮೂಡುಬಿದಿರೆ: ಈಜಲು ಹೋದ ವೇಳೆ ನಾಲ್ವರು ನೀರುಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ‌ಮೂಡಬಿದ್ರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂದಲೆ ನದಿಯಲ್ಲಿ ನಡೆದಿದೆ.

ವಾಮಂಜೂರು ಮೂಡುಶೆಡ್ಡೆ ನಿಖಿಲ್ (18), ಅರ್ಶಿತಾ (20), ವೇಣೂರಿನ ಸುಬಾಸ್ (19) ಹಾಗೂ ಬಜ್ಪೆಯ ರವಿ(30)‌ ಮೃತಪಟ್ಟ ದುರ್ದೈವಿಗಳು.

ಇವರು ಮೂಡುಬಿದಿರೆಯ ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಗೆ ವಿವಾಹ ಸಮಾರಂಭಕ್ಕೆ ಬಂದಿದ್ದರು. ಮದುವೆಗೆ ಬಂದಿದ್ದ ಇವರು ಶಾಂಭವಿ ನದಿಯ ತುಲೆಮುಗೇರ್ ಎಂಬಲ್ಲಿ ನದಿಯಲ್ಲಿ ಈಜಲು ಹೋದಾಗ ಈ ಘಟನೆ ನಡೆದಿದೆ.ಈ ಸಂಬಂಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!