Monday, May 6, 2024
spot_imgspot_img
spot_imgspot_img

ಕಲಾತಪಸ್ವಿ ಸಾಂಸ್ಕೃತಿಕ ತಂಡ ಆಯೋಜಿಸಿದ ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆಯ ವಿಜೇತರ ಪಟ್ಟಿ

- Advertisement -G L Acharya panikkar
- Advertisement -

ಕಲಾತಪಸ್ವಿ ಸಾಂಸ್ಕೃತಿಕ ತಂಡ ಆರಂಭವಾದ ಒಂದೇ ವರ್ಷದಲ್ಲಿ ವಿನೂತನವಾದ ಕಾರ್ಯಕ್ರಮಗಳು,ಸೇವಾ ನಿಧಿ ಯೋಜನೆಗಳು, ವಿವಿಧ ಬಗೆಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿಕೊಂಡು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡ ಯಶಸ್ವಿ ಒಂದು ಕಲಾತಂಡ.

40-50 ಯುವ ಪ್ರತಿಭೆಗಳನ್ನು ಒಳಗೊಂಡ ಈ ತಂಡ ಪ್ರತಿ ತಿಂಗಳು ಒಂದಲ್ಲ ಒಂದು ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಕಲಾಭಿಮಾನಿಗಳ ಮನಸ್ಸಲ್ಲಿ ಶಾಶ್ವತವಾದ ನೆಲೆಯನ್ನು ಕಂಡುಕೊಳ್ಳಲು ಯಶಸ್ವಿಯಾಗಿದೆ.

ಕಲಾತಪಸ್ವಿ ಸಾಂಸ್ಕೃತಿಕ ತಂಡ ಯುವ ಪ್ರತಿಭೆಗಳಿಗೋಸ್ಕರ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜಿಸಿ ಅದರಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿತ್ತು. ಆ ಸಾಲಿಗೆ ಇನ್ನೊಂದು ಸೇರ್ಪಡೆ ಕಳೆದ ತಿಂಗಳು ಆರಂಭವಾಗಿದ್ದ ” ಮುದ್ದು ಶ್ರೀ ಕೃಷ್ಣ ಭಾವಚಿತ್ರ ಸ್ಪರ್ಧೆ -2023″. ಆನ್ಲೈನ್ ಸ್ಪರ್ಧೆ ಇದಾಗಿದ್ದು 50ದಿನಗಳ ಕಾಲ ಸಾಗಿದ ಈ ಸ್ಪರ್ಧೆಯಲ್ಲಿ ರಾಜ್ಯದ 15 ಜಿಲ್ಲೆಗಳಿಂದ ಒಟ್ಟು 456 ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆ ರಾಜ್ಯಮಟ್ಟದಲ್ಲಿ ಸುದ್ದಿಯನ್ನು ಮಾಡಿತ್ತು. ಈ ಸ್ಪರ್ಧೆಯಿಂದ ಕಲಾ ತಂಡವು ಇನ್ನಷ್ಟು ಪ್ರಸಿದ್ದಿಯನ್ನು ಪಡೆದು, ಕಲಾಭಿಮಾನಿಗಳ ಪ್ರಶಂಶೆಗೆ ಪಾತ್ರವಾಯಿತು.

ಈ ಸ್ಪರ್ಧೆಯ ವಿಜೇತರ ಪಟ್ಟಿ ಕೆಳಗಿನಂತಿದೆ.

ಪ್ರಥಮ :ನಕ್ಷತ್ರ ಮಂಗಳೂರು
ದ್ವಿತೀಯ :ವೇದಾಂತ್ ಬಂಟ್ವಾಳ
ತೃತೀಯ :ಶಿವಾಂಕ್ ಮಂಗಳೂರು

ಬಹುಮಾನ ವಿತರಣೆ ಕಾರ್ಯಕ್ರಮವು 19-09-23ರಂದು ಕಂಬಳಬೆಟ್ಟು -ಧರ್ಮನಗರದಲ್ಲಿ ನಡೆಯಲಿರುವ 52ನೇ ವರ್ಷದ
ಶ್ರೀ ಮಹಾಗಣೇಶೋತ್ಸವದ ವೇದಿಕೆಯಲ್ಲಿ ನೀಡಲಾಗುವುದು.

ವಿಜೇತರಿಗೆ ಬಹುಮಾನ ರೂಪವಾಗಿ
ಪ್ರಥಮ :3,001 ನಗದು + ಶ್ರೀಕೃಷ್ಣ ಟ್ರೋಫಿ +ಪ್ರಶಸ್ತಿ ಪತ್ರ
ದ್ವಿತೀಯ : 2,001 ನಗದು + ಶ್ರೀಕೃಷ್ಣ ಟ್ರೋಫಿ + ಪ್ರಶಸ್ತಿ ಪತ್ರ
ತೃತೀಯ : 1,001 ನಗದು + ಶ್ರೀಕೃಷ್ಣ ಟ್ರೋಫಿ + ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

- Advertisement -

Related news

error: Content is protected !!