


ಮುಳಿಯ :, ದಿನಾಂಕ 11-10-2024ನೇ ಶುಕ್ರವಾರ ಮತ್ತು ದಿನಾಂಕ 12-10-2024ನೇ ಶನಿವಾರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ (ರಿ.) ಮುಳಿಯ ದಂಬೆ ವಠಾರದಲ್ಲಿ 25ನೇ ವರ್ಷದ ಶಾರದಾ ಮಹೋತ್ಸವವು ವೇದಮೂರ್ತಿ ಶ್ರೀ ಉದಯ ಭಟ್ ಪೆರುವಾಯಿ ಇವರ ನೇತೃತ್ವದಲ್ಲಿ ನಡೆಯಲಿದೆ.
ದಿನಾಂಕ : 11-10-2024ನೇ ಶುಕ್ರವಾರ ಬೆಳಿಗ್ಗೆ ಗಂಟೆ 8.30ಕ್ಕೆ ಗಣಪತಿ ಹೋಮ ನಂತರ ಬೆಳಿಗ್ಗೆ ಗಂಟೆ 9.00ಕ್ಕೆ ಶಾರದಾ ಮೂರ್ತಿ ಪ್ರತಿಷ್ಠಾಪನೆ, ಬೆಳಿಗ್ಗೆ ಗಂಟೆ 10.00ಕ್ಕೆ ಚಂಡಿಕಾ ಹೋಮ ಶ್ರೀ ವಿಶ್ವೇಶ್ವರ ಭಟ್ ಪಡ್ಯೂರು ಸಂಸ್ಕೃತಿ ಚಿಂತಕರು ಪೌರೋಹಿತ್ಯದಲ್ಲಿ ಜರಗಳಿದೆ.
ಬೆಳಿಗ್ಗೆ ಗಂಟೆ 11 ರಿಂದ ಮಧ್ಯಾಹ್ನ ಗಂಟೆ 12.30ರ ವರೆಗೆ ಸ್ತ್ರೀಶಕ್ತಿ ಸದಸ್ಯರು ಮತ್ತು ಶ್ರೀ ಶಾರದಾ ಮಹಿಳಾ ಮಂಡಳಿ, ಮುಳಿಯ – ಇದರಿಂದ ಭಜನೆ ನಡೆಯಲಿದೆ.
ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಮಂಗಳಾರತಿ ನಡೆಯುವುದು ಬಳಿಕ ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಮಧ್ಯಾಹ್ನ ಗಂಟೆ 2.00ರಿಂದ ವಿವಿಧ ಆಟೋಟ ಸ್ಪರ್ಧೆ ಜರಗಳಿದೆ. ಮಹಿಳೆಯರಿಗೆ : ಹಗ್ಗಜಗ್ಗಾಟ, ಗೂಟಕ್ಕೆ ರಿಂಗು ಹಾಕುವುದು, ಭಕ್ತಿಗೀತೆ ಸ್ಪರ್ಧೆ, ಸಂಗೀತ ಕುರ್ಚಿ
ಪುರುಷರಿಗೆ : ಹಗ್ಗಜಗ್ಗಾಟ, ಗೂಟಕ್ಕೆ ರಿಂಗು ಹಾಕುವುದು, ಭಕ್ತಿಗೀತೆ ಸ್ಪರ್ಧೆ ನಡೆಯಲಿದೆ.
ಸಂಜೆ ಗಂಟೆ 7.00ರಿಂದ ಶ್ರೀ ಶಾಸ್ತಾ ಕಲಾ ವೇದಿಕೆಯಲ್ಲಿ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ಕಲಾ ಸನ್ನಸಾಬಿ ಪ್ರಶಾಂತ್ ಸಿ. ಕೆ. ಮತ್ತು ರಂಗಕೇಸರಿ ರಮೇಶ್ ರೈ ಕುಕ್ಕುವಳ್ಳಿ ಅಭಿನಯದೊಂದಿಗೆ “ತನಿಯಜ್ಜೆ” ನಾಟಕ ಅತ್ತ್ ನಂಬಿಕೆ ತುಳು ವಿನೂತನ ಶೈಲಿಯ ನಾಟಕ ಜರಗಳಿದೆ.
ರಾತ್ರಿ ಗಂಟೆ 8.30ಕ್ಕೆ ರಾತ್ರಿ ಪೂಜೆ, ಪ್ರಸಾದ ವಿತರಣೆ ನಂತರ ರಾತ್ರಿ ಗಂಟೆ 9.30ಕ್ಕೆ ಅನ್ನಸಂತರ್ಪಣೆ ಜರಗಳಿದೆ.
ದಿನಾಂಕ 12-10-2024ನೇ ಶನಿವಾರ ಬೆಳಿಗ್ಗೆ ಗಂಟೆ 9.00ಕ್ಕೆ ಬೆಳಗ್ಗಿನ ಪೂಜೆ, ಬೆಳಿಗ್ಗೆ ಗಂಟೆ 10.30ರಿಂದ ಮಧ್ಯಾಹ್ನ ಗಂಟೆ 12.30ರ ವರೆಗೆ ಶ್ರೀ ಅಯ್ಯಪ್ಪ ಭಜನಾ ಮಂಡಳಿ, ಮುಳಿಯ – ಇವರಿಂದ ಭಜನೆ ನಂತರ ಮಧ್ಯಾಹ್ನ ಗಂಟೆ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಶಾಸ್ತಾ ಕಲಾ ವೇದಿಕೆಯಲ್ಲಿ ಅಪರಾಹ್ನ ಗಂಟೆ 2.00ರಿಂದ 3.00 ರವರೆಗೆ ಮುಳಿಯ ಅಂಗನವಾಡಿ ಪುಟಾಣಿಗಳಿಂದ ಹಾಗೂ ಸ್ಥಳೀಯ ಪ್ರತಿಭೆಗಳಿಂದ “ನೃತ್ಯ ವೈಭವ” ಸಾಂಸ್ಕೃತಿಕ ಕಾರ್ಯಕ್ರಮ ಜರಗಳಿದೆ.
ಮಧ್ಯಾಹ್ನ ಗಂಟೆ 3.00ರಿಂದ 4.35ರ ತನಕ ಚಕ್ರಪಾಣಿ ನೃತ್ಯ ಕಲಾ ಕೇಂದ್ರ ಅತ್ತಾವರ-ಮಂಗಳೂರು ಇದರ ನೃತ್ಯಗುರು ದ.ಕ.ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ವಿದ್ವಾನ್ ಸುರೇಶ್ ಅತ್ತಾವರರವರ ಶಿಷ್ಯವೃಂದದವರಿಂದ ನೃತ್ಯಾರ್ಚನೆ” ಹಾಗೂ “ಕೊಂಬುದ ಮದಿಮಾಯೆ” ತುಳು ನೃತ್ಯರೂಪಕ ನಡೆಯಲಿದೆ.
ಸಂಜೆ ಗಂಟೆ 4.15ರಿಂದ ಲಘು ಉಪಾಹಾರ ಇರುತ್ತದೆ. ಸಂಜೆ ಗಂಟೆ 4.30ರಿಂದ 5.30 – ಶ್ರೀ ಶಾಸ್ತಾ ಕುಣಿತ ಭಜನಾ ತಂಡ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಮುಳಿಯ – ದಂಬೆ ಅವರಿಂದ “ಕುಣಿತ ಭಜನೆ” ನಡೆಯಲಿದೆ.
ಸಂಜೆ ಗಂಟೆ 6.30ರಿಂದ ಮಹಾಪೂಜೆ, ನಂತರ ಪ್ರಸಾದ ವಿತರಣೆ ಇದೆ. ರಾತ್ರಿ ಗಂಟೆ 7.00ಕ್ಕೆ ಶ್ರೀ ಶಾರದಾ ಮಾತೆಯ ಭವ್ಯ ಮೆರವಣಿಗೆಯು ಶ್ರೀ ಮೂಕಾಂಬಿಕಾ ಕೃಪಾ ಮುಖ್ಯಪ್ರಾಣ ವ್ಯಾಯಾಮ ಶಾಲೆ, ಬೆರಿಪದವು – ಇವರಿಂದ “ತಾಲೀಮು ಪ್ರದರ್ಶನ, ಕುಣಿತ ಭಜನೆ, ನಾಸಿಕ್ ಬ್ಯಾಂಡ್ (ಶರಣಂ ನಾಸಿಕ್ ಬ್ಯಾಂಡ್ ಕುದ್ದುಪದವು – ಇವರಿಂದ) ವಿಶೇಷ ಆಕರ್ಷಣೆಯೊಂದಿಗೆ ಹೊರಡಲಿದೆ.
ಶ್ರೀ ಶಾರದಾ ಮಾತೆಯ ಮೆರವಣಿಗೆಯು ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ವಠಾರದಿಂದ ಹೊರಟು ತಾಳಿಪಡುವರೆಗೆ ಮುಂದುವರಿದು ಅಲ್ಲಿಂದ ತಿರುಗಿ ಮುಳಿಯ ದಿ| ಜಯಪ್ರಕಾಶ ಕೆ. ಆಳ್ವರ ತೋಟದ ಕೆರೆಯಲ್ಲಿ ಜಲಸ್ತಂಭನವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
