Friday, May 17, 2024
spot_imgspot_img
spot_imgspot_img

ಮುರುಘಾ ಶರಣರ ಕೈಗೆ ಮತ್ತೇ ಮುರುಘಾಮಠದ ಅಧಿಕಾರ; ಹೈಕೋರ್ಟ್‌ ಆದೇಶ..!

- Advertisement -G L Acharya panikkar
- Advertisement -

ಡಾ.ಶಿವಮೂರ್ತಿ ಮುರುಘಾ ಶರಣರ ಕೈಗೆ ಮುರುಘಾಮಠದ ಅಧಿಕಾರ ದೊರೆತಿದೆ. 2022ರ ಸೆ.1ರಂದು ಪೋಕ್ಸೋ ಕೇಸ್​ನಲ್ಲಿ ಮುರುಘಾ ಶ್ರೀ ಬಂಧನವಾಗಿತ್ತು. ಈ ಹಿನ್ನಲೆ ಮುರುಘಾ ಮಠಕ್ಕೆ ಆಡಳಿತಾಧಿಕಾರಿಯನ್ನು ರಾಜ್ಯ ಸರ್ಕಾರವೇ ನೇಮಿಸಿತ್ತು. ಬಳಿಕ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್ ಮೊರೆ ಹಿನ್ನೆಲೆ ಹೈಕೋರ್ಟ್ ಆಡಳಿತಾಧಿಕಾರಿ ನೇಮಕಾತಿ ರದ್ದು ಪಡಿಸಿತ್ತು. ಮುರುಘಾಶ್ರೀ ಜೈಲಿನಲ್ಲಿದ್ದ ಕಾರಣ ಪಿಡಿಜೆಗೆ ತಾತ್ಕಾಲಿಕ ಅಧಿಕಾರ ನೀಡಿತ್ತು.

ಅದರಂತೆ ಚಿತ್ರದುರ್ಗ ಪಿಡಿಜೆ, ಮಠದ ಆಡಳಿತಾಧಿಕಾರಿ ಆಗಿದ್ದರು. ನವೆಂಬರ್ 16ರಂದು ಜಾಮೀನಿನ ಮೇಲೆ ಮುರುಘಾಶ್ರೀ ಬಿಡುಗಡೆಯಾದ ಹಿನ್ನಲೆ ಮಠದ ಆಧಿಕಾರ ಹಿಂದಿರುಗಿಸುವಂತೆ ಮುರುಘಾಶ್ರೀ ಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಚಿತ್ರದುರ್ಗ ಪಿಡಿಜೆಯಿಂದ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರಿಸಿ ಹೈಕೋರ್ಟ್​ ಆದೇಶಿಸಿದ ಬೆನ್ನಲ್ಲೇ ಲಕೋಟೆ ಮೂಲಕ ಮುರುಘಾಶ್ರೀಗೆ ಅಧಿಕಾರ ಹಸ್ತಾಂತರ ಪತ್ರ ರವಾನಿಸಲಾಗಿದೆ.

ಚಿತ್ರದುರ್ಗ ಜಿಲ್ಲೆ ಪ್ರವೇಶಿಸದಂತೆ ಮುರುಘಾಶ್ರೀಗೆ ಹೈಕೋರ್ಟ್ ಷರತ್ತು ನೀಡಿದ ಹಿನ್ನಲೆ ಜಿಲ್ಲೆಯಿಂದ ಹೊರಗಿದ್ದುಕೊಂಡೇ ಮುರುಘಾ ಶ್ರೀಗಳು ಮಠದ ಆಡಳಿತವನ್ನು ನಡೆಸಲಿದ್ದಾರೆ.

- Advertisement -

Related news

error: Content is protected !!