Saturday, June 28, 2025
spot_imgspot_img
spot_imgspot_img

ಉಡುಪಿ: ನೆರೆಗೆ ಕೊಚ್ಚಿ ಹೋದ ಕಾರು ; ನಾಲ್ವರು ಪ್ರಾಣಾಪಾಯದಿಂದ ಪಾರು

- Advertisement -
- Advertisement -

ಉಡುಪಿ: ಕಾರೊಂದು ರಭಸವಾಗಿ ಹರಿಯುವ ನೀರಿಗೆ ಕೊಚ್ಚಿ ಹೋಗಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಉಡುಪಿಯ ಕನ್ನರ್ಪಾಡಿ-ಕಡೇಕಾರ್ ರಸ್ತೆಯ ಬಳಿ ಸಂಭವಿಸಿದೆ.

ಅದೃಷ್ಟವಶಾತ್ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಉಡುಪಿಯ ಕನ್ನರ್ಪಾಡಿ-ಕಡೆಕ್ಕಾರು ಸಂಪರ್ಕದ ರಸ್ತೆಯು ಮಳೆಗೆ ಸಂಪೂರ್ಣ ಜಲಾವೃತಗೊಂಡಿತ್ತು. ಜಲಾವೃತ ವಾದ ರಸ್ತೆಯಲ್ಲೇ ಕಾರು ಚಲಾಯಿಸಿದ್ದರು.‌ನೀರಿನ ಹರಿವಿನ ರಭಸಕ್ಕೆ ನೀರಿನಲ್ಲಿ ಕಾರು ಕೊಚ್ಚಿ ಹೋಗಿದೆ.

ಕಾರಿನಿಂದ ಹೊರಗೆ ಹಾರಿ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ‌. ಗದ್ದೆಯಲ್ಲಿ ಸಿಲುಕಿಕೊಂಡ ಕಾರನ್ನು ಅಗ್ನಿ ಶಾಮಕ ದಳ ಮತ್ತು ಸ್ಥಳೀಯರು ರಕ್ಷಿಸಿದ್ದಾರೆ ಎಂದು ವರದಿಯಾಗಿದೆ.

- Advertisement -

Related news

error: Content is protected !!