Friday, March 29, 2024
spot_imgspot_img
spot_imgspot_img

ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ – ಇಬ್ಬರು ಸ್ಥಳದಲ್ಲೇ ಸಾವು

- Advertisement -G L Acharya panikkar
- Advertisement -

ನೆಲಮಂಗಲ: ಬೆಳ್ಳಂಬೆಳಿಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಬಳಿ ಭೀಕರ ಅಪಘಾತ ಸಂಭವಿಸಿದೆ. ಇಲ್ಲಿನ ಬಿ.ಹೆಚ್. ಮುಖ್ಯಬಳಿ ರಸ್ತೆ ಕಂಟೇನರ್ ಲಾರಿ ಹರಿದು ಇಬ್ಬರು ವಾಹನ ಸವಾರರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸುನೀಲ್​ (28) ಮತ್ತು ಪರಮೇಶ್​(28) ಮೃತ ದುರ್ದೈವಿಗಳು.


ಕಂಟೇನರ್ ಲಾರಿ ಚಾಲಕ ಹ್ಯಾಂಡ್​ ಬ್ರೇಕ್ ಹಾಕದೇ ಇದ್ದ ಕಾರಣ ಲಾರಿ ಹಿಂದಕ್ಕೆ ಚಲಿಸಿದ್ದು, ಹಿಂದೆ ಬರುತ್ತಿದ್ದ ಓಮ್ನಿ ಕಾರಿಗೆ ಮತ್ತು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಸುನೀಲ್​ ಹಾಗೂ ಬೈಕ್​ ಸವಾರ ಪರಮೇಶ್​​ ಸಾವನ್ನಪ್ಪಿದ್ದಾರೆ.


ಘಟನೆಗೂ ಮುನ್ನ ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿಯಲ್ಲೂ ಇದೇ ಕಂಟೇನರ್ ಲಾರಿ​ ಚಾಲಕ ಬೇರೊಂದು ವಾಹನಕ್ಕೆ ಡಿಕ್ಕಿ ಹೊಡೆದು ಬಂದಿದ್ದಾನೆ ಎನ್ನಲಾಗಿದೆ.
ಅಲ್ಲಿನ ಜನಸಾಮಾನ್ಯರು ನೆಲಮಂಗಲದವರೆಗೆ ಟ್ರಕ್ ​ಹಿಂಬಾಲಿಸಿದ ಕಾರಣ ಭಯಬಿದ್ದು, ತಪ್ಪಿಸಿಕೊಳ್ಳಲು ಪಟ್ಟಣ ಪ್ರವೇಶಿದ್ದ. ಇನ್ನೇನು ಜನರಿಗೆ ಸಿಕ್ಕಿಬಿದ್ದರೆ ಧರ್ಮದೇಟು ಬೀಳುತ್ತದೆಂದು ಹ್ಯಾಂಡ್ ಬ್ರೇಕ್​ ಹಾಕದೇ ರಸ್ತೆಯಲ್ಲಿ ಲಾರಿ ಬಿಟ್ಟು ಪರಾರಿಯಾದ ಕಾರಣ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.ಸ್ಥಳಕ್ಕೆ ನೆಲಮಂಗಲ ಸಂಚಾರಿ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!