Friday, June 27, 2025
spot_imgspot_img
spot_imgspot_img

ನೆಲ್ಲಿಕಟ್ಟೆ: ಆಟೋ ರಿಕ್ಷಾದ ಗ್ಲಾಸ್‌ಗೆ ಹಾನಿಗೊಳಿಸಿದ ವಿಚಾರದಲ್ಲಿ ಮಾತಿನ ಚಕಮಕಿ..!

- Advertisement -
- Advertisement -

ಪುತ್ತೂರು: ಆಟೋ ರಿಕ್ಷಾದ ಹಿಂಬದಿಯ ಗ್ಲಾಸ್ ಒಡೆದು ಹಾನಿಗೊಳಿಸಿದ ವಿಚಾರದಲ್ಲಿ ಗ್ಲಾಸ್ ಒಡೆದಿರುವುದಾಗಿ ಎನ್ನಲಾದ ವ್ಯಕ್ತಿಗಳಿಬ್ಬರ ಮತ್ತು ರಿಕ್ಷಾ ಚಾಲಕರ ನಡುವೆ ಮಾತಿನ ಚಕಮಕಿ ನಡೆದ ಘಟನೆ ಜೂ.26 ರಂದು ರಾತ್ರಿ ನೆಲ್ಲಿಕಟ್ಟೆಯಲ್ಲಿ ನಡೆದಿದೆ.

ನೆಲ್ಲಿಕಟ್ಟೆ ಈಶ ವಿದ್ಯಾಲಯದ ಬಳಿ ನಿಂತಿದ್ದ ಆಟೋ ರಿಕ್ಷಾದ ಹಿಂಬದಿಯ ಗಾಜು ಒಡೆದ ಸ್ಥಿತಿಯಲ್ಲಿತ್ತು. ಗಮನಿಸಿದ ರಿಕ್ಷಾ ಚಾಲಕ ರಿಕ್ಷಾದ ಪಕ್ಕದಲ್ಲೇ ನಶೆಯಲ್ಲಿದ್ದ ವ್ಯಕ್ತಿಗಳಿಬ್ಬರನ್ನು ಸ್ಥಳಿಯರೊಂದಿಗೆ ಸೇರಿ ವಿಚಾರಿಸಿದಾಗ ಓರ್ವ ವ್ಯಕ್ತಿಯ ಕೈಯಲ್ಲಿ ರಕ್ತ ಚಿಮ್ಮುತ್ತಿರುವುದು ಬೆಳಕಿಗೆ ಬಂದಾಗ ಆತನ ಮೇಲೆ ನೆರೆದವರಿಗೆ ಸಂಶಯ ವ್ಯಕ್ತವಾಗಿ ಆತನನ್ನು ತರಾಟೆಗೆತ್ತಿಕೊಂಡರು.

ಮಾತಿಗೆ ಮಾತು ಬೆಳೆದು ಹಲ್ಲೆ ನಡೆಸುವ ಮಟ್ಟಕ್ಕೆ ಮಾತಿನ ಚಕಮಕಿ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಪೊಲೀಸರು ವಿಚಾರಣೆ ನಡೆಸಿ ಅಕ್ಕಪಕ್ಕದವರ ವಿಡಿಯೋ ಮಾಡಿದರು. ಈ ನಡುವೆ ಸ್ಥಳದಲ್ಲಿದ್ದವರು ಅಲ್ಲಿಂದ ತೆರಳಿದರು ಎಂದು ತಿಳಿದುಬಂದಿದೆ.

- Advertisement -

Related news

error: Content is protected !!