Monday, April 29, 2024
spot_imgspot_img
spot_imgspot_img

ನೇರಳಕಟ್ಟೆ : ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ಅಧ್ಯಕ್ಷರಾಗಿ ಎ.ಕೆ.ಹೈದರ್ ಅವಿರೋಧ ಆಯ್ಕೆ

- Advertisement -G L Acharya panikkar
- Advertisement -

ಬಂಟ್ವಾಳ : ನೇರಳಕಟ್ಟೆ ಸಮೀಪದ ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಎ.ಕೆ.ಹೈದರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸ್ಥಳೀಯ ಮಸೀದಿಯ ಗೌರವಾಧ್ಯಕ್ಷ ಹಾಜಿ ಪಿ.ಕೆ. ಆದಂ ದಾರಿಮಿ ಅವರು ಉಪಸ್ಥಿತಿಯಲ್ಲಿ ಅಧ್ಯಕ್ಷ ದರ್ಬಾರ್ ಅಬ್ದುಲ್ ಖಾದರ್ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.

ಕಾರ್ಯದರ್ಶಿ ಸಿದ್ದೀಕ್ ಸ್ವಾಗತಿಸಿ, ಗತ ವರ್ಷದ ವರದಿ ವಾಚಿಸಿದರು. ಕೋಶಾಧಿಕಾರಿ ಕೆ.ಬಿ.ಕಾಸಿಂ ಹಾಜಿ
ಲೆಕ್ಕ ಪತ್ರ ಮಂಡಿಸಿದರು. ಪ್ರಾರ್ಥನೆ ಮೂಲಕ ಮಹಾಸಭೆಗೆ ಚಾಲನೆ ನೀಡಿದ ಮಸೀದಿ ಗೌರವಾಧ್ಯಕ್ಷ ಹಾಜಿ ಪಿ.ಕೆ.ಆದಂ ದಾರಿಮಿ, ಮುಂದಿನ ಸಾಲಿನ ನೂತನ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ನಿರ್ಗಮನ ಅಧ್ಯಕ್ಷ ದರ್ಬಾರ್ ಅಬ್ದುಲ್ ಖಾದರ್ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಾಗೂ ಮಸೀದಿ ಕಡತಗಳನ್ನು ಹಸ್ತಾಂತರಿಸಿದರು. ಈ ಸಂದರ್ಭ ಮಸೀದಿ ಖತೀಬ್ ಸೈದಾಲಿ ಮುಸ್ಲಿಯಾರ್ ಉಪಸ್ಥಿತರಿದ್ದರು.

ನೂತನ ಪದಾಧಿಕಾರಿಗಳು: ಅಧ್ಯಕ್ಷರಾಗಿ ಎ.ಕೆ. ಹೈದರ್ ಪರ್ಲೊಟ್ಟು, ಉಪಾಧ್ಯಕ್ಷರಾಗಿ ಪಿ.ಕೆ.ಅಬ್ಬಾಸ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಕೆ.ಝುಬೈರ್, ಕಾರ್ಯದರ್ಶಿಯಾಗಿ ಆಶಿಕ್ , ಕೋಶಾಧಿಕಾರಿಯಾಗಿ ಕೆ.ಬಿ.ಕಾಸಿಂ ಹಾಜಿ ಮಿತ್ತೂರು ಅವರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ದರ್ಬಾರ್ ಅಬ್ದುಲ್ ಖಾದರ್, ಪಿ.ಕೆ.ರಶೀದ್ ಪರ್ಲೊಟ್ಟು, ಸಿದ್ದೀಕ್ ಪರ್ಲೊಟ್ಟು, ಎಸ್.ಎಂ.ರಫೀಕ್ ಹಾಜಿ ನೇರಳಕಟ್ಟೆ, ಲತೀಫ್ ನೇರಳಕಟ್ಟೆ, ಹಮೀದ್ (ಅಮ್ಮಿ) ಪರ್ಲೊಟ್ಟು, ಕೆ.ಬಿ.ಇಸ್ಮಾಯಿಲ್ ಹಾಜಿ, ಸಮದ್ , ಶರೀಫ್, ಸಲೀಂ, ಫಾರೂಕ್ ಹನೀಫಿ ಹಾಗೂ ಜುನೈದ್ ಪರ್ಲೊಟ್ಟು ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.

- Advertisement -

Related news

error: Content is protected !!