- Advertisement -
- Advertisement -
ಬಂಟ್ವಾಳ: ವಿಟ್ಲ ಸಮೀಪದ ಕೊಡಾಜೆ ನಿವಾಸಿ ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಾಣಿ ಕೊಡಾಜೆ ನಿವಾಸಿ ನೀರಜ್ ಯಾನೆ ನೀಲು(30) ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ.

ನೀರಜ್ ಅವರ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಇದರಿಂದ ಮನನೊಂದ್ದಿದ್ದ ನೀರಜ್ ಅವರು ನಿನ್ನೆ ತಡರಾತ್ರಿ ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿ ಈ ಬಗ್ಗೆ ಬರೆದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.


- Advertisement -