- Advertisement -
- Advertisement -
ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯಿರವರ ಪೂರ್ವಾಶ್ರಮದ ಪಿತಾಶ್ರೀ ಕನ್ಯಾನ ಗ್ರಾಮದ ಬಂಡಿತ್ತಡ್ಕ ನಿವಾಸಿ ತಲೆಕ್ಕಲ ಜನಾರ್ದನ ಶೆಟ್ಟಿ(೭೫ ವ.)ರವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಸೆ.25ರ ತಡರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಬಂಟ್ವಾಳ ತಾಲೂಕಿನ ಹಲವು ಪ್ರಾಥಮಿಕ ಶಾಲೆಗಳಲ್ಲಿ ಅದ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದು, ಬಳಿಕ ಮುಖ್ಯೋಪಾದ್ಯಾಯರಾಗಿ ಭಡ್ತಿಹೊಂದಿ ನಿವೃತ್ತರಾಗಿದ್ದರು.
ಸುಮಾರು ೧೦ವರ್ಷಗಳ ಕಾಲ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲೂ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಮೃತರು ಸಾಧ್ವಿ ಶ್ರೀ ಮಾತಾನಂದಮಯಿರವರು ಸೇರಿ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
- Advertisement -