Saturday, June 28, 2025
spot_imgspot_img
spot_imgspot_img

ಒಡಿಯೂರು ಶ್ರೀ ಸಂಸ್ಥಾನಕ್ಕೆ ಶ್ರೀಮದ್ ಎಡನೀರು ಮಠದ ನೂತನ ಪೀಠಾಧಿಪತಿ ಭೇಟಿ

- Advertisement -
- Advertisement -


ವಿಟ್ಲ: ಜಗದ್ಗುರು ಶ್ರೀ ಶಂಕರಾಚಾರ್ಯ ತೋಟಕಾಚಾರ್ಯ ಪರಂಪರೆಯ ಶ್ರೀ ಮದ್ ಎಡನೀರು ಮಠದ ನೂತನ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ( ಜಯರಾಮ ಮಂಜತ್ತಾಯ)ಯವರು ಒಡಿಯೂರು ಗುರುದೇವದತ್ತ ಸಂಸ್ಥಾನಕ್ಕೆ ಭೇಟಿ ನೀಡಿ ದತ್ತಾಂಜನೇಯ ದೇವರ ಹಾಗೂ ನಿತ್ಯಾನಂದ ಗುಹಾಲಯದಲ್ಲಿಪಂಚಮುಖಿ ಆಂಜನೇಯ ದೇವರ ದರ್ಶನ ಪಡೆದರು.

ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಗಳವರು ಶಾಲು ಹೊದಿಸಿ ದೇವರ ಪ್ರಸಾದ ನೀಡಿ ಶುಭಹಾರೈಸಿದರು.


ವೇ|ಬ್ರಹ್ಮಶ್ರೀ| ರವೀಶ ತಂತ್ರಿ ಕುಂಟಾರು, ಎಡನೀರು ಮಠದ ಪುರೋಹಿತರಾದ ಗೋಪಾಲಕೃಷ್ಣ ಅಡಿಗ ಉಪಸ್ಥಿತರಿದ್ದರು. ಒಡಿಯೂರು ಸಂಸ್ಥಾನದ ಪುರೋಹಿತರಾದ ವೇ|ಮೂ| ಚಂದ್ರಶೇಖರ ಉಪಾಧ್ಯಾಯ ಹಾಗೂ ವೈದಿಕ ವೃಂದ, ಸಹಸಂಸ್ಥೆಗಳ ಪ್ರಮುಖರಾದ ಎ. ಸುರೇಶ್ ರೈ, ಎ. ಅಶೋಕ್ ಕುಮಾರ್, ಶ್ರೀಮತಿ ಸರ್ವಾಣಿ ಪಿ. ಶೆಟ್ಟಿ, ಪಿ. ಲಿಂಗಪ್ಪ ಗೌಡ, ಮಲಾರು ಜಯರಾಮ ರೈ, ಗಣಪತಿ ಭಟ್ ಸೇರಾಜೆ, ಯಶವಂತ ವಿಟ್ಲ, ಸುಬ್ರಹ್ಮಣ್ಯ ಒಡಿಯೂರು, ಶಶಿಧರ ಶೆಟ್ಟಿ ಜಮ್ಮದಮನೆ ಇವರುಗಳು ಬರಮಾಡಿಕೊಂಡರು.

- Advertisement -

Related news

error: Content is protected !!