ವಿಟ್ಲ : SSF ಮಂಗಿಲಪದವು ಸೆಕ್ಟರ್ ನ ಅಧೀನದಲ್ಲಿರುವ ಒಕ್ಕೆತ್ತೂರು ಶಾಖೆಗೆ ನೂತನ ಸಾರಥಿಗಳನ್ನು ಆರಿಸಲಾಯಿತು. ಒಕ್ಕೆತ್ತೂರು ಮಸೀದಿ ಬಳಿಯ ಸುನ್ನೀ ಮಂಝಿಲ್ ನಲ್ಲಿ ಆದಿತ್ಯವಾರ ಅಸ್ತಮಿಸಿದ ಸೋಮವಾರ ರಾತ್ರಿ ನಡೆದ ಮಹಾ ಸಭೆಯನ್ನು ಹರ್ಶದ್ ಸಖಾಫಿ ಉದ್ಘಾಟಿಸಿದರು.
ಪ್ರಸ್ತುತ ಸಭೆಯಲ್ಲಿ ಅಬ್ದುಲ್ ರಝ್ಝಾಕ್ ಮುಸ್ಲಿಯಾರ್ ರವರು ಅಧ್ಯಕ್ಷತೆ ವಹಿಸುತ್ತಾ ಸಂಘಟನಾ ತರಬೇತಿ ನಡೆಸಿದರು. ಚುನಾವಣಾ ವೀಕ್ಷಕರಾಗಿ ತಲುಪಿದ ಸೆಕ್ಟರ್ ಅಧ್ಯಕ್ಷರಾದ ಹಕೀಂ ಮುಸ್ಲಿಯಾರ್ ರವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಅಧ್ಯಕ್ಷರು:- ಹರ್ಶದ್ ಸಖಾಫಿ , ಉಪಾಧ್ಯಕ್ಷರು :- ಮುಸ್ತಫಾ ವಿ.ಎಮ್ ,ಪ್ರ.ಕಾರ್ಯದರ್ಶಿ :- ಇರ್ಫಾನ್.ವಿ ,ಕೋಶಾಧಿಕಾರಿ :- ಮುಹಮ್ಮದ್ ರಾಫಿಅ್, ಕಾರ್ಯದರ್ಶಿ :- ಮಹ್-ರೂಫ್, ಕಾರ್ಯದರ್ಶಿ :- ಖಲಂದರ್ ಅಸ್ಪಾಕ್, ಕಾರ್ಯದರ್ಶಿ :-ಝಾಹಿರ್, ಕಾರ್ಯದರ್ಶಿ :- ಜಾಬಿರ್, ಕಾರ್ಯದರ್ಶಿ :- ಅಸ್ಕರ್ ಅಲಿ,
ಕಾರ್ಯದರ್ಶಿ :- ಶಹೀರ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರ್ಶದ್ ಸಖಾಫಿ , ಮುಸ್ತಫಾ ವಿ.ಎಮ್ , ಜಾಬಿರ್ , ಮಹ್-ರೂಫ್ , ಖಲಂದರ್ ಅಸ್ಪಾಕ್ , ಇರ್ಫಾನ್.ವಿ , ಅಸ್ಕರ್ ಅಲಿ , ಮುಹಮ್ಮದ್ ರಾಫಿಅ್ , ಭಾತಿಶ್ ,ಝಾಹಿರ್ , ಸಿನಾನ್ , ಶಾಹಿಮ್ , ಶಹೀರ್ ರವರನ್ನು ಆಯ್ಕೆ ಮಾಡಲಾಯಿತು. ನಂತರ ಪೂರ್ವ ಸಮಿತಿಯಿಂದ ನೂತನ ಸಮಿತಿಗೆ ಧ್ವಜ ಹಾಗೂ ಕಡತಗಳನ್ನು ಹಸ್ತಾಂತರಿಸಲಾಯಿತು.