- Advertisement -
- Advertisement -
ಕುಳ: ಸಂಸ್ಕಾರಯುತ ಜೀವನಕ್ಕೆ ಶಿಕ್ಷಣ ಅಗತ್ಯ, ಶಿಕ್ಷಣವು ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಗುಣಶ್ರೀ ವಿದ್ಯಾಲಯದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ವಕೀಲರಾದ ಶ್ರೀ ಗೋವಿಂದರಾಜರವರು ತಿಳಿಸಿದರು.
ನಿವೃತ್ತ ಶಿಕ್ಷಕ ಶ್ರೀ ಪುಂಡರೀಕ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾಲಯದ ಸಂಚಾಲಕರಾದ ಶ್ರೀ ವೇಣುಗೋಪಾಲ ಶೆಟ್ಟಿ, ಮುಖ್ಯ ಗುರುಗಳಾದ ಶ್ರೀ ರಾಜಾರಾಮ ವರ್ಮ , ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು.
ಶಿಕ್ಷಕಿ ಕುಮಾರಿ ಶ್ರೀನಿಧಿ ನಿರೂಪಣೆಗೈದರು.ವಾಣಿಶ್ರೀ ಸ್ವಾಗತಿಸಿದರು.ರೇಖಾ ವಂದನಾರ್ಪಣೆ ಸಲ್ಲಿಸಿದರು
- Advertisement -