ಲಾಹೋರ್ (ನ.1): ಲಾಹೋರ್ನ ಗಲ್ಲಿ ಗಲ್ಲಿಯಲ್ಲೂ ಪ್ರಧಾನಿ ಮೋದಿ ಹಾಗೂ ಅಭಿನಂದನ್ ವರ್ಧಮಾನ್ ಅವರ ಪೋಸ್ಟರ್ಗಳು ರಾರಾಜಿಸುತ್ತಿವೆ ಅಯಾಜ್ ಸಾಧಿಕ್ ಹೇಳಿದ್ದೇನು..?
ಅಭಿನಂದನ್ ಅವರನ್ನು ವಶಕ್ಕೆ ಪಡೆದ ನಂತರ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರ ಕಾಲುಗಳು ನಡುಗುತ್ತಿದ್ದವು. ದಮ್ಮಯ್ಯ ಅಂತೀನಿ ಅಭಿನಂದನ್ರನ್ನು ಹೋಗಲು ಬಿಡಿ.. ಇಲ್ಲವಾದರೆ ಭಾರತ ಪಾಕಿಸ್ತಾನದ ಮೇಲೆ ರಾತ್ರಿ 9 ಗಂಟೆಗೆ ದಾಳಿ ಮಾಡಲಿದೆ ಎಂದು ಖುರೇಷಿ ಮನವಿ ಮಾಡಿಕೊಂಡಿದ್ದರು ಎಂದು ಅಯಾಸ್ ಪಾರ್ಲಿಮೆಂಟ್ನಲ್ಲಿ ಹೇಳಿದ್ದರು. ಅವರ ಈ ಹೇಳಿಕೆ ಪಾಕಿಸ್ತಾನ ಸರ್ಕಾರಕ್ಕೆ ದೊಡ್ಡ ಮುಜುಗರ ಉಂಟುಮಾಡಿತ್ತು. ವಾಸ್ತವತೆಯನ್ನ ಬಿಚ್ಚಿಟ್ಟ ಸಂಸದನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಇದರ ಮುಂದುವರಿದ ಭಾಗವಾಗಿ ಲಾಹೋರ್ನ ಗಲ್ಲಿ ಗಲ್ಲಿಯಲ್ಲೂ ಪ್ರಧಾನಿ ಮೋದಿ, ಅಭಿನಂದನ್ ಅವರ ಪೋಸ್ಟರ್ಗಳು ರಾರಾಜಿಸುತ್ತಿವೆ. ಆದರೆ ಇದು ಮೋದಿ ಹಾಗೂ ಅಭಿನಂದನ್ರನ್ನ ಹೊಗಳಿ ಅಥವಾ ಭಾರತವನ್ನ ಬೆಂಬಲಿಸಿ ಹಾಕಿರುವ ಬ್ಯಾನರ್, ಪೋಸ್ಟರ್ಗಳಲ್ಲ. ಬದಲಾಗಿ ಸರ್ದಾರ್ ಅಯಾಜ್ ಸಾಧಿಕ್ರನ್ನ ವಿರೋಧಿಸಿ ಹಾಕಲಾಗಿರುವ ಪೋಸ್ಟರ್ಗಳು.
ಪಾಕಿಸ್ತಾನದ ಇನ್ನೊಂದು ಮುಖವನ್ನ ಬಿಚ್ಚಿಟ್ಟ ಸರ್ದಾರ್ ಅಯಾಜ್ ಸಾಧಿಕ್ ವಿರುದ್ಧ ಪಾಕಿಸ್ತಾನದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದೆ. ಅದೇ ಕಾರಣಕ್ಕೆ ಸರ್ದಾರ್ ಅಯಾಜ್ ಸಾಧಿಕ್ರನ್ನ ಅವಮಾನಿಸಿ ಮೂದಲಿಸಿ ಮೋದಿ ಹಾಗೂ ಅಭಿನಂದನ್ ಜೊತೆಗಿನ ಫೋಟೋವನ್ನ ಹಾಕುತ್ತಿದ್ದಾರೆ. ಪಾಕ್ ವಶಕ್ಕೆ ಪಡೆದ ದಿನದಿಂದ ಅಭಿನಂದನ್ ಅವರ ಮೀಸೆ ತುಂಬಾನೇ ಫೇಮಸ್ ಆಗಿದೆ. ಅಂತೆಯೇ ಸರ್ದಾರ್ ಅಯಾಜ್ ಸಾಧಿಕ್ಗೆ ಅಭಿನಂದನ್ ಅವರ ಮೀಸೆಯನ್ನ ಬಿಡಿಸಿ ಪೋಸ್ಟರ್ ಅಂಟಿಸಿದ್ದಾರೆ. ಅಲ್ಲದೇ ಪೋಸ್ಟರ್ನಲ್ಲಿ ಅವರ ವಿರುದ್ಧ ಮೋಸಗಾರ ಮೀರ್ ಸಾಧಿಕ್, ಮೋದಿಯ ಸ್ನೇಹಿತ, ದೇಶದ್ರೋಹಿ ಅಂತೆಲ್ಲಾ ಬರೆದಿದ್ದಾರೆ.