- Advertisement -
- Advertisement -
ಪಾಣೆಮಂಗಳೂರು: ಯುವಕನೋರ್ವ ಸೇತುವೆಯ ಟ್ಯಾಂಕ್ ಬಳಿಯಿಂದ ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪಾಣೆಮಂಗಳೂರು ಹೊಸ ಸೇತುವೆಯ ಟ್ಯಾಂಕ್ ಬಳಿಯಿಂದ ನೇತ್ರಾವತಿ ಸೇತುವೆ ಬಳಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕ ಪುತ್ತೂರು ನಿವಾಸಿ ಆನಂದ ಎಂಬವರ ಪುತ್ರ ನಿಶ್ಚಿತ್ (25) ಎಂದು ಗುರುತಿಸಲಾಗಿದೆ.
ಈತ ಎಂ.ಎಸ್.ಡಬ್ಲ್ಯು ಓದಿದ್ದರೂ ನಿರುದ್ಯೋಗಿಯಾಗಿದ್ದು ಸೂಕ್ತ ಉದ್ಯೋಗ ಸಿಗದ ಹಿನ್ನಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದು ಪಾಣೆಮಂಗಳೂರು ಹೊಸ ಸೇತುವೆಯ ಟ್ಯಾಂಕ್ ಬಳಿಯಿಂದ ನೇತ್ರಾವತಿಗೆ ಜಿಗಿದ ಆತ್ಮಹತ್ಯೆಗೆ ಸಿದ್ಧತೆಯಲ್ಲಿದ್ದ. ಆ ಕೂಡಲೇ ಸ್ಥಳೀಯ ನಿವಾಸಿಗಳಾದ ಹನೀಫ್ ಭಾಯಿ, ಸಲ್ಮಾನ್ ಫಾರಿಸ್, ಇರ್ಫಾನ್ ಖಲೀಲ್, ನೌಫಲ್ ಸಿ.ಪಿ., ತಸ್ಲೀಮ್ ಆರಿಫ್, ಮುಖ್ತಾರ್ ಅಕ್ಕರಂಗಡಿ, ಪಿ.ಎಂ.ಆರಿಫ್, ಮಮ್ಮು ಗೂಡಿನ ಬಳಿ ಎಂಬವರು ಗಮನಿಸಿ ಇತನನ್ನು ಪಾರು ಮಾಡಿದ್ದಾರೆ. ಬಳಿಕ ಯುವಕನನ್ನು ಪೊಲೀಸ್ ವಶಕ್ಕೆ ನೀಡಿದರು.
- Advertisement -