- Advertisement -
- Advertisement -
ಪಂಜ: ಜಾಂಡೀಸ್ ಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂಜದ ಯುವಕನೊಬ್ಬ ಮೃತಪಟ್ಟ ಘಟನೆ ಪಂಜದಲ್ಲಿ ನಡೆದಿದೆ.
ಮೃತಪಟ್ಟವರು ಕೂತ್ಕುಂಜ ಗ್ರಾಮದ ಕಲ್ಕ ದಿ.ಪದ್ಮಯ್ಯ ಗೌಡ ಮತ್ತು ಶ್ರೀಮತಿ ಇಂದಿರಾ ದಂಪತಿಗಳ ಪುತ್ರ ಪ್ರಶಾಂತ್ (39) ಎಂದು ಗುರುತಿಸಲಾಗಿದೆ.
ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಅವರು ಕೆಲವು ಸಮಯಗಳ ಹಿಂದೆ ಮನೆಗೆ ಬಂದಿದ್ದರು .ಅವರು ಜಾಂಡಿಸ್ ಗೆ ಒಳಗಾದರಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಮತ್ತೆ ಒಮ್ಮಿಂದೊಮ್ಮೆಲೆ ಅನಾರೋಗ್ಯಕ್ಕೆ ತುತ್ತಾಗಿ ಅವರನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
- Advertisement -