Wednesday, May 1, 2024
spot_imgspot_img
spot_imgspot_img

ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಹೊಡೆದು ಕೊಂದ ಜನರು..!!

- Advertisement -G L Acharya panikkar
- Advertisement -
vtv vitla

ಕಾರಿನಲ್ಲಿ ಗೋಮಾಂಸ ಸಾಗಿಸುತ್ತಿದ್ದ ವ್ಯಕ್ತಿಯನ್ನು ಜನರ ಗುಂಪೊಂದು ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್​ನಲ್ಲಿ ನಡೆದಿದೆ. ನಾಸಿರ್​ ಶೇಖ್ ಹಾಗೂ ಅಫಾನ್ ಅಬ್ದುಲ್ ಮಜೀದ್ ಅನ್ಸಾರಿ ಎಂಬವರು ಜೂನ್ 24ರಂದು ಮುಂಬೈಗೆ ಪ್ರಯಾಣಿಸುತ್ತಿದ್ದರು. ಅವರನ್ನು ಸಿನ್ನಾರ್ ಘೋಷಿ ಹೆದ್ದಾರಿಯಲ್ಲಿದ್ದಾಗ ಅವರ ಕಾರನ್ನು ತಪಾಸಣೆಗಾಗಿ ತಡೆಯಲಾಗಿತ್ತು.

ಕಾರಿನಲ್ಲಿ ಗೋಮಾಂಸ ಪತ್ತೆಯಾದ ಬಳಿಕ 10 ರಿಂದ 15 ಮಂದಿ ಅಪರಿಚಿತರು ಕಬ್ಬಿಣದ ರಾಡ್​ ಹಾಗೂ ದೊಣ್ಣೆಗಳಿಂದ ಅವರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದರು. ಇಬ್ಬರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಕೊಲೆ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!