- Advertisement -
- Advertisement -
ಪುತ್ತೂರು: ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಅರಿಯಡ್ಕ ಗ್ರಾಮದ ಶೇಖಮಲೆ ಜಾರತ್ತಾರು ಎಂಬಲ್ಲಿ ನಡೆದಿದೆ.
ಮೇ.31 ರಂದು ಮಧ್ಯರಾತ್ರಿ ಜಾರತ್ತಾರು ಎಂಬಲ್ಲಿ ರಾಮ ಎಂಬವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದಿದೆ. ರಾಮರವರು ಕೊಟ್ಟಿಗೆಯಲ್ಲಿ ಮಲಗಿದ್ದು, ಮಲಗಿದ್ದಲ್ಲಿಗೆ ಸಿಡಿಲು ಬಡಿದಿದೆ.
ಅವರು ಹಾಕಿಕೊಂಡಿದ್ದ ಬಟ್ಟೆ ಬರೆ ಸಹಿತ ಚಾಪೆಯೂ ಸುಟ್ಟಿದೆ. ಬೆನ್ನಿಗೆ ಭಾಗಕ್ಕೆ ಸುಟ್ಟ ಗಾಯಗಳಾಗಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
- Advertisement -