Monday, April 29, 2024
spot_imgspot_img
spot_imgspot_img

ವಿಟ್ಲ: ಅಂದರ್-ಬಾಹರ್ ಜುಗಾರಿ ಅಡ್ಡಕ್ಕೆ ಪೊಲೀಸ್‌ ದಾಳಿ : ನಾಲ್ವರು ಆರೋಪಿಗಳು ಸಹಿತ ನಗದು ವಶ

- Advertisement -G L Acharya panikkar
- Advertisement -

ವಿಟ್ಲ: ಅಂದರ್-ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಅಡ್ಡಕ್ಕೆ ಪೊಲೀಸ್‌ ದಾಳಿ ನಡೆಸಿದ ಘಟನೆ ವಿಟ್ಲ ಕಸಬ ಗ್ರಾಮದ, ನೆಕ್ಕರೆ ಕಾಡು ಎಂಬಲ್ಲಿ ನಡೆದಿದೆ

ದಿನಾಂಕ; 10-03-2024 ರಂದು ಸಂಜೆ ಸಮಯ, ಬಂಟ್ವಾಳ ತಾಲೂಕು ವಿಟ್ಲ ಕಸಬ ಗ್ರಾಮದ, ನೆಕ್ಕರೆ ಕಾಡು ಎಂಬಲ್ಲಿರುವ, ಕಲ್ಲಿನ ಕಲ್ಲಿನಕೋರೆಯ ಬಳಿಯ ಸಾರ್ವಜನಿಕ ಸ್ಥಳದಲ್ಲಿ, ಅಂದರ್-ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾಗ, ದಾಳಿ ನಡೆಸಿದ ವಿಟ್ಲ ಪೊಲೀಸ್‌ ಠಾಣಾ ಪೊಲೀಸ್‌ ಉಪ ನಿರೀಕ್ಷಕರಾದ ವಿಧ್ಯಾ ಕೆ ಜೆ ರವರು ಹಾಗು ಸಿಬ್ಬಂದಿಗಳ ತಂಡ ಜುಗಾರಿ ಆಟ ಆಡುತ್ತಿದ್ದ, ಧರ್ಮರಾಜ್, ಗೋಪಾಲ @ಚಂದ್ರಶೆಖರ, ವಲಿತ್ ಕೆ, ಕಲಂದರ್ ಶಾಫಿ ಎಂಬವರುಗಳನ್ನು ವಶಕ್ಕೆ ಪಡೆದು, ಸ್ಥಳದಲ್ಲಿದ್ದ ನಗದು ರೂಪಾಯಿ 1550/-, ಇಸ್ಪಿಟ್‌ ಎಲೆಗಳನ್ನು ಹಾಗೂ ಜುಗಾರಿ ಆಟಕ್ಕೆ ಬಳಸಿದ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿಸಿದ್ದಾರೆ, ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 41/2024, ಕಲಂ: 87 ಕರ್ನಾಟಕ ಪೊಲೀಸ್‌ ಕಾಯ್ದೆ ಯಂತೆ‌ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!