- Advertisement -
- Advertisement -
ಬೆಂಗಳೂರು ನ(12): ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂರಾಮ್ ಅವರಿಗೆ ಗಂಟಲು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ತಡರಾತ್ರಿಯೇ ಏರ್ ಲಿಫ್ಟ್ ಮೂಲಕ ಕುಟುಂಬಸ್ಥರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.
ಇತ್ತೀಚೆಗಷ್ಟೇ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಆಗಿ ಬಂದಿದ್ದ ಲಾಬೂರಾಮ್ ಅವರಿಗೆ ಮಧ್ಯೆ ರಾತ್ರಿ ಒಂದು ಗಂಟೆಗೆ ಏರ್ ಲಿಪ್ಟ್ ಮಾಡಲಾಗಿದೆ. ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಲಾಗಿದೆ.
ತೀವ್ರ ಗಂಟಲು ನೋವಿನಿಂದ ಬಳಲುತ್ತಿರುವ ಪೊಲೀಸ್ ಆಯುಕ್ತ ಲಾಬೂರಾಮ್ ಅವರಿಗೆ ಧಾರವಾಡದ
ಎಸ್.ಡಿಎಂ ಆಸ್ಪತ್ರೆಯಲ್ಲಿ ಸಣ್ಣ ಸರ್ಜರಿ ಮಾಡಲಾಗಿತ್ತು. ಆದ್ರು ಅದು ವಾಸಿಯಾಗಿರಲಿಲ್ಲ ಎಂದು ತಿಳಿದುಬಂದಿದೆ.
- Advertisement -