Sunday, May 19, 2024
spot_imgspot_img
spot_imgspot_img

ಗುಂಡು ಹಾರಿಸಿಕೊಂಡು ಪ್ರಾಣಬಿಟ್ಟ ಪೊಲೀಸ್‌ ಕಾನ್‌ಸ್ಟೇಬಲ್

- Advertisement -G L Acharya panikkar
- Advertisement -

ಗುಂಡು ಹಾರಿಸಿಕೊಂಡು ಕಾನ್‌ಸ್ಟೇಬಲ್​ ಒಬ್ಬರು ಸಾವಿಗೆ ಶರಣಾಗಿರುವ ಘಟನೆ ಚಿತ್ತಾಪುರ ತಹಸೀಲ್ದಾರ್ ಕಚೇರಿಯಲ್ಲಿ ನಡೆದಿದೆ.

ಮೃತ ಪೇದೆಯನ್ನು ಮಲ್ಲಿಕಾರ್ಜುನ (34) ಎಂದು ಗುರುತಿಸಲಾಗಿದೆ.

ಚಿತ್ತಾಪುರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.303 ರೈಫಲ್​ನಿಂದ ಗುಂಡು ಹಾರಿಸಿಕೊಂಡು ಕಾನ್ಸ್​ಟೆಬಲ್ ಪ್ರಾಣ ಬಿಟ್ಟಿದ್ದಾರೆ. ಮಲ್ಲಿಕಾರ್ಜುನ್​ ಅವರು ಚುನಾವಣೆ ನಿಮಿತ್ತ ಫ್ಲೈಯಿಂಗ್ ಸ್ವ್ಕಾಡ್​ ಕರ್ತವ್ಯದಲ್ಲಿದ್ದರು. ನಿನ್ನೆ ರಾತ್ರಿ ಚಿತ್ತಾಪುರ ತಹಸೀಲ್ದಾರ್ ಕಚೇರಿಯ ಬಳಿ ಕೆಲಸ ಮಾಡುತ್ತಿದ್ದರು. ಈ ವೇಳೆ ಗುಂಡು ಹಾರಿಸಿಕೊಂಡು ಬದುಕು ಅಂತ್ಯಗೊಳಿಸಿದ್ದಾರೆ.

ಮಲ್ಲಿಕಾರ್ಜುನ್​ ಅವರು ಚಿತ್ತಾಪುರ ತಾಲ್ಲೂಕಿನ ಶಹಬಾದ್ ಮಡ್ಡಿ ನಿವಾಸಿ. ಸಾವಿಗೆ ಕಾರಣ ಏನೆಂದು ತಿಳಿದುಬರಬೇಕಿದೆ. ಘಟನೆ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!